ಸುಂಟಿಕೊಪ್ಪ, ಸೆ. 8: ಪುತ್ತೂರಿನ ಕೌಡಿಚಾರ್ ಅರಿಯಡ್ಕ ಮಧ್ಯೆ ಬರುವ ಮಂಡ್ಯಂಗಲದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕೆರೆಗೆ ಕಾರು ಮಗುಚಿಕೊಂಡು ದುರ್ಮರಣವನ್ನಪ್ಪಿದ, ಅಂಚೆ ಇಲಾಖೆಯ ಎನ್.ಎಸ್. ಅಶೋಕ ಹಾಗೂ ಅವರ ಪತ್ನಿ ಶಿಕ್ಷಕಿ ಹೇಮಲತಾ, ಮಕ್ಕಳಾದ ವರ್ಷಾ, ಯಶಸ್‍ಗೌಡ ಅವರುಗಳಿಗೆ ಜೆಸಿಐ, ವಿವಿಧ ಸಂಘ ಸಂಸ್ಥೆಗಳು, ಹಿತೈಷಿಗಳು ಸುಂಟಿಕೊಪ್ಪ ನಾಡು ಕೊಡವ ಸಮಾಜದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಿತ್ತು.

ಈ ಸಭೆಯಲ್ಲಿ ಜೆಸಿಐ ಸಂಸ್ಥೆಯ ಜಾಹಿದ್ ಅಹ್ಮದ್, ವಹೀದ್ ಜಾನ್, ತಾ.ಪಂ. ಸದಸ್ಯೆ ಓಡಿಯಪ್ಪನ ವಿಮಲಾವತಿ, ಪಟ್ಟೆಮನೆ ಗಿರಿಜಾ ಉದಯಕುಮಾರ್, ಗ್ರಾ.ಪಂ. ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಡೆನ್ನಿಸ್ ಡಿಸೋಜ ಮತ್ತಿತರರು ಮೃತ ಕುಟುಂಬದ ಒಡನಾಟ ನೆನೆದು ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭ ವಿವಿಧ ಸಂಘ-ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.