ಮಡಿಕೇರಿ, ಸೆ. 8: ಮಡಿಕೇರಿಯ ಶ್ರೀ ಇಗ್ಗುತಪ್ಪ ಕೊಡವ ಕೇರಿ ಸಂಘದ ವತಿಯಿಂದ ತಾ. 10 ರಂದು (ನಾಳೆ) ಕೈಲ್‍ಪೊಳ್ದ್ ಸಂತೋಷಕೂಟ ಹಾಗೂ ವಾರ್ಷಿಕ ಮಹಾಸಭೆ ಜರುಗಲಿದೆ.

ಮಡಿಕೇರಿ ಕೊಡವ ಸಮಾಜದಲ್ಲಿ ಬೆಳಿಗ್ಗೆ 10.30 ರಿಂದ ಕೇರಿಯ ಅಧ್ಯಕ್ಷೆ ಚೌರೀರ ಕಾವೇರಿ ಪೂಣಚ್ಚ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ. ಸದಸ್ಯರಿಗೆ ಕ್ರೀಡಾಕೂಟ, ಸಭಾ ಕಾರ್ಯಕ್ರಮ, ಗಳಿಕ ಚೆಕ್ಕೇರ ಪಂಚಮ್ ತ್ಯಾಗರಾಜ್ ಅವರಿಂದ ಕೊಡವ ಹಾಡು ಕಾರ್ಯಕ್ರಮ ನಡೆಯಲಿದೆ.