ಕುಶಾಲನಗರ, ಸೆ. 3: ಕುಶಾಲನಗರ ಜೆಸಿಐ ಕಾವೇರಿ ವತಿಯಿಂದ ಗಿಡನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜೆಸಿಐ ರಾಷ್ಟ್ರೀಯ ಉಪಾಧ್ಯಕ್ಷ ಇಳೆಅರಸನ್ ಜೆಸಿಐ ಕುಶಾಲನಗರ ಕಾವೇರಿ ಇಂದು ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಮಹಿಳಾ ಸಮಾಜ ರಸ್ತೆಯಲ್ಲಿ ಗಿಡನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಮಾರ್ಗಸೂಚಿ ಸ್ವಾಗತ ನಾಮಫಲಕ ಉದ್ಘಾ ಟಿಸಿದರು.
ವಲಯ ಅಧ್ಯಕ್ಷ ಜಫಿನ್ಜಾಯ್, ಉಪಾಧ್ಯಕ್ಷ ಕೆ. ಪ್ರವೀಣ್, ಅಧಿಕಾರಿ ಭರತ್ ಆಚಾರ್ಯ, ಜೆಸಿಐ ಕುಶಾಲನಗರ ಕಾವೇರಿ ಅಧ್ಯಕ್ಷ ಜೆಸಿ ಪ್ರಶಾಂತ್, ಸ್ಥಾಪಕ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಕಾವೇರಿ ಪರಿಸರ ರಕ್ಷಣಾ ಬಳಗದ ಎಂ.ಎನ್.ಚಂದ್ರಮೋಹನ್, ಬಿ.ಜೆ.ಅಣ್ಣಯ್ಯ, ಜೆಸಿ ಪ್ರಮುಖರಾದ ರಾಜೇಂದ್ರ, ಸುಜಯ್ ಮತ್ತಿತರರು ಇದ್ದರು.