ಒಡೆಯನಪುರ, ಸೆ. 3: ಬೆಂಗಳೂರಿನ ಯೂತ್ಫಾರ್ ಸೇವಾ ಸಂಸ್ಥೆ ವತಿಯಿಂದ ಹಂಡ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆ ಸೇರಿದಂತೆ ಒಟ್ಟು 83 ವಿದ್ಯಾರ್ಥಿಗಳಿಗೆ ಉಚಿತ ವಾಗಿ ಶಿಕ್ಷಣ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಯೂತ್ಫಾರ್ ಸೇವಾ ಸಂಸ್ಥೆಯ ಎಸ್. ಆರ್. ನಂದೀಶ್, ವಕೀಲ ಎಸ್. ಜೆ. ಹೇಮಚಂದ್ರ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಎಚ್.ಕೆ. ಸುಶೀಲ ಅವರುಗಳು ಸೇವೆಗಾಗಿ ಮೀಸಲಿಡುತ್ತಿ ರುವ ಕಾರ್ಯ ಶ್ಲಾಘನಿಯವಾದದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮ ದಲ್ಲಿ ಸಂಸ್ಥೆಯ ಎಂ. ಪಿ. ನಾಗೇಶ್, ಎಚ್. ಡಿ. ರಂಜಿತ್ ಎಸ್ಡಿಎಂಸಿ ಅಧ್ಯಕ್ಷ ಲೋಕೇಶ್, ದೈಹಿಕ ಶಿಕ್ಷಣ ಶಿಕ್ಷಕಿ ಸುನಂದ, ಶಿಕ್ಷಕರಾದ ಎಂ.ಎಂ.ಪ್ಯಾರಿ, ರಾಧ, ಮಂಜುಳ, ವಿಕ್ರಾಂತ್, ರವಿ ಮುಂತಾದವರು ಇದ್ದರು.