ಮಡಿಕೇರಿ, ಆ. 30: ಶ್ರೀಮಂಗಲ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಕ್ರೀಡಾಕೂಟ ಅಲ್ಲಿನ ಮಂಚಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಗೊಂಡಿತು. ಉದ್ಘಾಟನೆಯನ್ನು ಕುಟ್ಟ ಗ್ರಾ.ಪಂ. ಸದಸ್ಯೆ ರುಕ್ಮಿಣಿ ಅವರು ನೆರವೇರಿಸಿದರು. ಧ್ವಜಾರೋಹಣವನ್ನು ವಿಠಲ್ ಸೋಮಯ್ಯ ನೆರವೇರಿಸಿದರು. ಸುರೇಶ್ ಮತ್ತು ತಂಡ ತಂದ ಕ್ರೀಡಾ ಜ್ಯೋತಿಯನ್ನು ಬೆಳಗಿನ ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ ಅವರು ದೇಹ ಮತ್ತು ಮನಸ್ಸು ಸದೃಢವಾಗಲು ಕ್ರೀಡೆ ಅಗತ್ಯವೆಂದರು. ಮುಖ್ಯ ಶಿಕ್ಷಕ ಸೋಮಯ್ಯ, ದೇವಮ್ಮ, ಆನಂದ, ವಿಶಾಲಾಕ್ಷಿ, ಹರೀಶ್ ವೇದಿಕೆಯಲ್ಲಿದ್ದರು. ಅಪರಾಹ್ನದ ಭೋಜನವನ್ನು ಸ್ಥಳೀಯರಾದ ಸುಬ್ರಮಣಿ, ಕಾಶಿ ಕಾರ್ಯಪ್ಪ, ಬೋಪಣ್ಣ, ವೇಣು ಕರುಂಬಯ್ಯ, ಅಪ್ಪಣ್ಣ ಪ್ರಾಯೋಜಿಸಿದ್ದರು. ಚಿತ್ರಾ ಹೆಚ್.ಪಿ. ಪ್ರಾರ್ಥಿಸಿದರು.