ಸುಂಟಿಕೊಪ್ಪ,ಆ.25: ಇಲ್ಲಿನ ಶ್ರೀ ಚಾಮುಂಡೇಶ್ವರಿ ಶ್ರೀ ಮುತ್ತಪ್ಪ ದೇವಸ್ಥಾನದ ಜೀರ್ಣೊದ್ಧಾರ ಕಾರ್ಯ ನಡೆಯುತ್ತಿದ್ದು ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ 1.50 ಲಕ್ಷ ಹಣವನ್ನು ನೀಡುವದಾಗಿ ಸಂಕಲ್ಪ ಮಾಡಿದ್ದ ಕಾಫಿ ಬೆಳೆಗಾರರು ಉದ್ಯಮಿ ಕೆ.ಪಿ.ಜಗನಾಥ್.ವಿಮಲ ಜಗನಾಥ್ ಅವರು ಮೊದಲ ಹಂತವಾಗಿ 50.ಸಾವಿರ ರೂ ಚೆಕ್ಕನ್ನು ಅಭಿವೃದ್ದಿ ಸಮಿತಿಯ ಅಧ್ಯಕ್ಷ ವೈ.ಎಂ.ಕರುಂಬಯ್ಯ ಅವರಿಗೆ ಹಸ್ತಾಂತರಿಸಿದರು.ಈ ಸಂದರ್ಭ ಉಪಾಧ್ಯಕ್ಷ ಪಿ.ಕೆ.ಶೇಷಪ್ಪ, ಖಜಾಂಚಿ ಎಸ್.ಜಿ.ಶ್ರೀನಿವಾಸ್, ನಿರ್ದೇಶಕರುಗಳಾದ ವಿ.ಎ.ಸಂತೋಷ್, ಎ. ಶ್ರೀಧರ್‍ಕುಮಾರ್, ವಿನೋದ್, ದೇವಸ್ಥಾನದ ಅರ್ಚಕ ದರ್ಶನ್‍ಭಟ್, ಶಿವಮಣಿ ಸಾರ್ವಜನಿಕರು ಹಾಜರಿದ್ದರು.