ನಾಪೆÇೀಕ್ಲು, ಆ. 25: 2020ನೇ ಸಾಲಿನ ದಕ್ಷಿಣ ಕನ್ನಡ ಮತ್ತು ಉಡುಪಿಯ ಕೊಡವ ಸ್ಟೂಡೆಂಟ್ ಅಸೋಸಿಯೇಶನ್ ಉದ್ಘಾಟನಾ ಕಾರ್ಯಕ್ರಮವು ಮಂಗಳೂರು ಸೆಂಟ್ ಅಲೋಶಿಯೆಸ್ ಪ್ರೈಮರಿ ಹಾಲ್‍ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಂಗುಲಂಡ ಜೀವನ್ ಬೆಳ್ಯಪ್ಪ ಉದ್ಘಾಟಿಸಿದರು.

ಕೃತಿಕಾ ಪ್ರಾರ್ಥನೆ, ಅಸೋಸಿಯೇಶನ್ ಅಧ್ಯಕ್ಷ ಕೇಟೋಳಿರ ವಿಕಾಶ್ ತಿಮ್ಮಯ್ಯ ಸ್ವಾಗತ. ಖಜಾಂಚಿ ತಿರೋಡಿರ ಮನೋಜ್ ಮಂದಪ್ಪ ಕಳೆದ ವರ್ಷದ ಖರ್ಚುವೆಚ್ಚ ಮಂಡಿಸಿದರು. ಕಾರ್ಯದರ್ಶಿ ಚೆಪ್ಪುಡಿರ ನಿತೀನ್ ಚಿಟ್ಟಿಯಪ್ಪ ಅತಿಥಿ ಪರಿಚಯಿಸಿ, ಉಪಾಧ್ಯಕ್ಷೆ ಸ್ಪರ್ಧಾ ವಂದಿಸಿದರು.