ಕುಶಾಲನಗರ, ಆ. 17: ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಸರಕಾರದಲ್ಲಿ ಸಚಿವರನ್ನಾಗಿ ನಿಯೋಜಿಸಬೇಕೆಂದು ಕುಶಾಲ ನಗರದ ಬಿಜೆಪಿ ಪ್ರಮುಖರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಕುಶಾಲನಗರ ನಗರ ಬಿಜೆಪಿ ಅಧ್ಯಕ್ಷ ಕೆ.ಜಿ. ಮನು, ಪ.ಪಂ. ಸದಸ್ಯ ಡಿ.ಕೆ. ತಿಮ್ಮಪ್ಪ ಮತ್ತಿತರರು ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಸಧ್ಯದಲ್ಲಿಯೇ ಬೆಂಗಳೂರಿಗೆ ನಿಯೋಗ ತೆರಳುವದಾಗಿ ತಿಳಿಸಿದ್ದಾರೆ.