ಮಡಿಕೇರಿ, ಆ. 13: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮದೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಿ.ಡಿ.ಓ. ಸುರೇಶ್ ಅವರ ನೇತೃತ್ವದಲ್ಲಿ ಸ್ತನ್ಯಪಾನ ಅರಿವು ಕಾರ್ಯಕ್ರಮ ನಡೆಯಿತು.

ಮಹಿಳಾ ಮೇಲ್ವಿಚಾರಕಿ ಹಾಗೂ ಎ.ಸಿ.ಡಿ.ಪಿ.ಓ. ಸವಿತ ಮಾತೃವಂದನಾ, ಮಾತೃಶ್ರೀ, ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ ತಿಳಿಸಿದರು. ಸಂಪಾಜೆ ವೃತ್ತದ ಮೇಲ್ವಿಚಾರಕಿ ಕೆ. ಶೀಲಾ ಸ್ತನ್ಯಪಾನದ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಶಿಕ್ಷಕಿ ದೇವರಕೊಲ್ಲಿಯ ಪಾರ್ವತಿ, ಜೋಡುಪಾಲ ಎಂ.ಆರ್. ಮನೋಹರಿ, ಮದೆನಾಡು ಬಿ.ಕೆ. ಕುಸುಮ, ಗೋಳಿಕಟ್ಟೆ ಸರಿತ, ಬೆಳಕುಮಾನಿ ಉಷಾ ಉಪಸ್ಥಿತರಿದ್ದರು. ಪೋಷಕರು, ಗರ್ಭಿಣಿ ಬಾಣಂತಿಯರು ಹಾಜರಿದ್ದರು.