ಶನಿವಾರಸಂತೆ, ಆ. 13: ಶನಿವಾರಸಂತೆ ಲಯನ್ಸ್ ಕ್ಲಬ್ ಹುಣಸೂರು ಕಾವೇರಿ ಸಂಭ್ರಮ ಇದರ 2019-20ನೇ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇತ್ತೀಚೆಗೆ ಮೈಸೂರಿನ ಹೊಟೇಲ್ ಕಲ್ಯಾಣಿಯಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ರಾಜ್ಯಪಾಲರಾದ ಡಾ. ನಾಗರಾಜ್ ಬೈರಿ ಅವರು ವಹಿಸಿದ್ದರು. ಕ್ಲಬ್ನ ಪದಗ್ರಹಣದ ವಿಧಿ ವಿಧಾನಗಳನ್ನು ಮಾಜಿ ಜಿಲ್ಲಾ ಗೌವರ್ನರ್ ವಿಜಯಕುಮಾರ್ ಶೆಟ್ಟಿ ಅವರು ನೆರವೇರಿಸಿದರು. ಕ್ಲಬ್ನ 2019-20ನೇ ಸಾಲಿನ ಅಧ್ಯಕ್ಷರಾಗಿ ಎನ್.ಬಿ. ನಾಗಪ್ಪ, ಕಾರ್ಯದರ್ಶಿಯಾಗಿ ಎಂ.ಆರ್. ನಿರಂಜನ್, ಖಜಾಂಚಿಯಾಗಿ ಬಿ.ಕೆ. ಚಿಣ್ಣಪ್ಪ ಇವರುಗಳನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ 1ನೇ ಉಪಾಧ್ಯಕ್ಷರಾಗಿ ಬಿ.ಸಿ. ಧರ್ಮಪ್ಪ, 2ನೇ ಉಪಾಧ್ಯಕ್ಷರಾಗಿ ಜಿ. ನಾರಾಯಣ ಸ್ವಾಮಿ, 3ನೇ ಉಪಾಧ್ಯಕ್ಷರಾಗಿ ಎನ್.ಕೆ. ಅಪ್ಪಸ್ವಾಮಿ ಇವರುಗಳನ್ನು ಆಯ್ಕೆ ಮಾಡಲಾಯಿತು.
ಉಳಿದಂತೆ ಕ್ಲಬ್ನ ಸದಸ್ಯರುಗಳಾದ ಸಿ.ಪಿ. ಹರೀಶ್, ಕೆ.ಎನ್. ಕಾರ್ಯಪ್ಪ, ಟಿ.ಎಸ್. ಪುಟ್ಟರಾಜ್, ಪತ್ರಕರ್ತ ಎಸ್.ಜಿ. ನರೇಶ್ಚಂದ್ರ, ಟಿ.ಆರ್. ಕೇಶವಮೂರ್ತಿ, ಎಸ್.ವಿ. ಹರೀಶ್, ಕೆ.ಎಂ. ಜಗನ್ಪಾಲ್, ಎಸ್.ಎಸ್. ಚಂದ್ರಶೇಖರ್, ಎನ್.ಕೆ. ಮೂರ್ತಿ, ಎಂ.ಆರ್. ಮಲ್ಲೇಶ್, ಜಿ.ಪಿ. ಪುಟ್ಟಪ್ಪ, ಜಿ.ಬಿ. ಪರಮೇಶ, ಲಿಂಗರಾಜ್ ಇವರುಗಳನ್ನು ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಿ ಪ್ರಮಾಣವಚನ ಸ್ವೀಕರಿಸಲಾಯಿತು.
ಗೌವರ್ನರ್ ಡಾ. ನಾಗರಾಜ್ ಬೈರಿ ಹಾಗೂ ಮಾಜಿ ಗೌವರ್ನರ್ ವಿಜಯಕುಮಾರ್ ಶೆಟ್ಟಿ ಇವರುಗಳನ್ನು ಕ್ಲಬ್ ನಡೆಸುವ ಬಗ್ಗೆ ಪೂರ್ಣ ಮಾಹಿತಿ ನೀಡಿದರು.