ಚೆಟ್ಟಳ್ಳಿ, ಆ. 13: ಕೊಡಗು ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ವಿವಿಧ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ಮಾಡಿ ಸಾಂತ್ವನ ಹೇಳಲಾಯಿತು. ಅವಶ್ಯಕತೆ ಇರುವ ಸಾಮಗ್ರಿಗಳನ್ನು ತಲಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಹೊರ ಊರಿನಿಂದ ಹಲವರು ನೆರವಾಗುತ್ತಿದ್ದು, ಅವರಿಂದ ಸಂಗ್ರಹವಾದ ವಸ್ತುಗಳನ್ನು ಅರ್ಹರಿಗೆ ತಲಪಿಸಲು ಎಸ್.ಎಸ್.ಎಫ್., ಎಸ್.ವೈ.ಎಸ್. ಕಾರ್ಯಕರ್ತರ ಪಡೆಯನ್ನು ರಚಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಜೀಜ್ ಸಖಾಫಿ ತಿಳಿಸಿದ್ದಾರೆ.