ಚೆಟ್ಟಳ್ಳಿ, ಜು. 26: ಅಮ್ಮತ್ತಿಯಲ್ಲಿ ನೂತವಾಗಿ ರಚನೆಗೊಂಡಿರುವ ಅಮ್ಮತ್ತಿ ಸ್ನೇಹಿತರ ಬಳಗದ ವತಿಯಿಂದ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಮುಂದುವರೆದ ಭಾಗವಾಗಿ ತಾ. 27 ರಂದು (ಇಂದು) ಅಮ್ಮತ್ತಿಯ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ‘ಸ್ವಚ್ಛತೆಯಲ್ಲಿ ಯುವ ಪೀಳಿಗೆಯ ಪಾತ್ರ’ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ ನಡೆಯಲಿದೆ.