ಸುಂಟಿಕೊಪ್ಪ, ಜು. 25: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾಗಿ ರೋಸ್ ಮೇರಿ ರಾಡ್ರಿಗಸ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಎಸ್. ಸುನೀಲ್ ನೇಮಕಗೊಂಡಿದ್ದಾರೆ.

ಗ್ರಾಮ ಪಂಚಾಯಿತಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಾರ್ಷಿಕ ಮಹಾಸಭೆಯು ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಗ್ರಾ.ಪಂ.ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ನಡೆದು ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು.

ಉಪಾಧ್ಯಕ್ಷರಾಗಿ ಪಿ.ಎಫ್. ಸಬಾಸ್ಟೀನ್, ನಾಗೇಶ್ ಪೂಜಾರಿ, ಲೀಲಾವತಿ ಮೇದಪ್ಪ, ಸಹ ಕಾರ್ಯದರ್ಶಿಯಾಗಿ ಎಂ.ಬಿ. ವಿನ್ಸೆಂಟ್, ಖಜಾಂಚಿಯಾಗಿ ಬಿ.ಎಂ. ಮಣಿ ಮುಖೇಶ್, ಸಂಘಟನಾ ಕಾರ್ಯದರ್ಶಿಯಾಗಿ ತಾಹೀರಾ,ನಾಗರತ್ನ ಸುರೇಶ್, ಗೌರವ ಸಲಹೆಗಾರರಾಗಿ ಠಾಣಾಧಿಕಾರಿ ಜಯರಾಂ, ಕಾಲೇಜು ಪ್ರಾಂಶುಪಾಲರಾದ ಪಿ.ಎಸ್. ಜಾನ್ ಪಿ.ಆರ್.ಸುಕುಮಾರ್, ಓಡಿಯಪ್ಪನ ವಿಮಲಾವತಿ, ಕೃಷಿಯಾಧಿಕಾರಿ ಮನಸ್ವಿ, ಬಿ.ಡಿ.ರಾಜು ರೈ,ವಹೀದ್ ಜಾನ್,ಶಿವಣ್ಣ,ಕೌಶಿಕ್,ಪಾಸುರ ನಂದ, ಸಮಿತಿ ಸದಸ್ಯರಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ,ಬಿ.ಎಂ.ಚಂದ್ರ, ಮುತ್ತಯ್ಯ, ಜಯಂತ್,ಜೆಸಿಂತ ಡಿಸೂಜ, ಜಿ.ಪಂ. ಸದಸ್ಯರು, ಗ್ರಾ.ಪಂ.ಸದಸ್ಯರು, ವಿವಿಧ ಶಾಲಾ ಕಾಲೇಜಿನ ಮುಖ್ಯ ಶಿಕ್ಷಕರು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರುಗಳನ್ನು, ಅಂಗನವಾಡಿ ಕಾರ್ಯಕರ್ತರನ್ನು ನೇಮಕ ಮಾಡಲಾಯಿತು.

ಇದೇ ಸಂದರ್ಭ ಸ್ವಾತಂತ್ರ್ಯ ದಿನಾಚರಣೆಯ ಕುರಿತಾಗಿ ಸಲಹೆಗಳನ್ನು ಪಡೆದು ತಾ. 29 ರಂದು ಪೂರ್ವಭಾವಿ ಸಭೆಯನ್ನು ಗ್ರಾ.ಪಂ.ಯ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಯಿತು.

ಸಮಿತಿ ಕಾರ್ಯದರ್ಶಿ ಎಂ.ಎಸ್. ಸುನೀಲ್, ಸ್ವಾಗತಿಸಿ, ವರದಿ ವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಸುನಿಲ್ ವಂದಿಸಿದರು.