ಮಡಿಕೇರಿ, ಜೂ. 16: ಮೇಕೇರಿ ಮತ್ತು ಹಾಕತ್ತೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ರಸ್ತೆ ಕಾಮಗಾರಿಗಳ ಉದ್ಘಾಟನೆ ಮತ್ತು ಭೂಮಿ ಪೂಜೆಯನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಿದರು. ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹಾಕತ್ತೂರು ಬಿಳಿಗೇರಿ ತೊರಮಣ ರಸ್ತೆ ಉದ್ಘಾಟನೆ ಹಾಗೂ ರೂ. 10 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ಮೇಕೇರಿ ನವಗ್ರಾಮ ರಸ್ತೆ ಹಾಗೂ ಹಾಕತ್ತೂರು ತೊಂಬತ್ತುಮನೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಶಾಸಕ ಬೋಪಯ್ಯ ರಸ್ತೆ ಕಾಮಗಾರಿ ಗಳು ಕಳಪೆಯಾಗದಂತೆ ಸ್ಥಳೀಯರು ಗಮನ ಹರಿಸುವಂತೆ ಮನವಿ ಮಾಡಿದರು. ಈ ಸಂದರ್ಭ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ತಾ.ಪಂ. ಸದಸ್ಯೆ ಕುಮುದ, ಹಾಕತ್ತೂರು ಗ್ರಾ.ಪಂ. ಅಧ್ಯಕ್ಷ ಶಾರದ, ಮೇಕೇರಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಗ್ರಾ.ಪಂ.ನ ಸದಸ್ಯರುಗಳು, ಬಿ.ಜೆ.ಪಿ. ಯ ಗ್ರಾಮ ಸಮಿತಿ ಪದಾಧಿಕಾರಿ ಗಳು ಸೇರಿದಂತೆ ಸ್ಥಳೀಯ ಸಾರ್ವಜನಿಕರು ಹಾಜರಿದ್ದರು.