ಶನಿವಾರಸಂತೆ, ಜೂ. 11: ಪಟ್ಟಣದ ಅಂಗಡಿಯೊಂದರಲ್ಲಿ ಜ್ಯೂಸ್ ಕುಡಿದು ಹೊರಬರುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಚಾಲಕ ವ್ಯಾನ್‍ನಲ್ಲಿ ಕೂರಿಸಿಕೊಂಡು ಕರೆದೊಯ್ಯುತ್ತಿದ್ದ ಸಂದರ್ಭ ತಡೆಗೋಡೆಗೆ ಡಿಕ್ಕಿಯಾಗಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಗುಂಡೂರಾವ್ ಬಡಾವಣೆಯ ಗಣೇಶ್ ಅವರ ಪುತ್ರ ಎಸ್.ಜಿ. ಕಿರಣ್ ಗಾಯಗೊಂಡ ವಿದ್ಯಾರ್ಥಿ. ಚಾಲಕ ಮಹಮ್ಮದ್ ಶಹೀಬ್ ವ್ಯಾನ್ ಅನ್ನು ರಸ್ತೆ ಬದಿಯ ತಡೆಗೋಡೆಗೆ ಡಿಕ್ಕಿಪಡಿಸಿದಾಗ ವ್ಯಾನ್ ಪಕ್ಕದ ಚರಂಡಿಗೆ ಮಗುಚಿಕೊಂಡಿತು.

ಗಾಯಗೊಂಡ ಕಿರಣ್‍ಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹೇಮಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.