ಸುಂಟಿಕೊಪ್ಪ, ಜೂ. 11: ಐಗೂರು ಗ್ರಾಮ ಪಂಚಾಯಿತಿಯ ಬಳಿ ಐಗೂರಿನಿಂದ ಯಡವಾರೆ, ಕಾಜೂರು, ಯಡವನಾಡು ಗ್ರಾಮದ ಸಂಪರ್ಕ ಕಲ್ಪಿಸುತ್ತಿರುವ ಪಾಷಾಣಮೂರ್ತಿ ದೇವಾಲಯದ ಮೂಲಕ ಹಾದು ಹೋಗುವ ಸೇತುವೆ ಕುಸಿಯುವ ಹಂತದಲ್ಲಿದೆ.
ಈಗಾಗಲೇ ಈ ಸೇತುವೆಯ ಮುಖ್ಯ ಪಿಲ್ಲರ್ ಬಿರುಕುಬಿಟ್ಟಿದ್ದು ಕಾಂಕ್ರಿಟ್ ಒಂದೊಂದಾಗಿ ಹೊಳೆಗೆ ಕಳಚಿ ಬೀಳುತ್ತಿದೆ. ಅಪಾಯದ ಸ್ಥಿತಿಯಲ್ಲಿರುವ ಈ ಸೇತುವೆಯನ್ನು ದುರಸ್ತಿಪಡಿಸದ್ದಿದಲ್ಲಿ ಅನಾಹುತ ಎದುರಾಗಲಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸೇತುವೆ ದುರಸ್ತಿ ಕಾಮಗಾರಿಗೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.