ಶನಿವಾರಸಂತೆ, ಮೇ 17: ಶನಿವಾರಸಂತೆ ಸಮೀಪದ ಗೋಪಾಲಪುರ ಗ್ರಾಮದ ಲಾರೆನ್ಸ್ ಮಿನೇಜಸ್ ಮತ್ತು ಸೆಲೆನ್ ಮಿನೇಜಸ್ ದಂಪತಿಯ ಪುತ್ರ ಸುಪ್ರಿತ್ ಮಿನೇಜಸ್ ಚಿಕ್ಕಮಗಳೂರು ಕ್ರೈಸ್ತ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ. ಟಿ. ಅಂಥೋಣಿ ಸ್ವಾಮಿ ಅವರಿಂದ ಹಸ್ತ ಯೋಜಕ ದೀಕ್ಷಾ ಸಂಸ್ಕಾರವನ್ನು ಗೋಪಾಲಪುರ ಸಂತ ಅಂಥೋಣಿ ಚರ್ಚ್‍ನಲ್ಲಿ ನಡೆದ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಸ್ವೀಕರಿಸಿದರು. ರಾಜ್ಯದ ವಿವಿಧ ಚರ್ಚ್‍ಗಳ ಫಾದರ್‍ಗಳು, ಭಕ್ತಾದಿಗಳು, ಕ್ರೈಸ್ತ ಕುಟುಂಬಸ್ಥರು, ಕ್ರೈಸ್ತ ಬಾಂಧವರು ನೂತನವಾಗಿ ದೀಕ್ಷಾ ಸಂಸ್ಕಾರ ಸ್ವೀಕರಿಸಿದರು.