ಮಡಿಕೇರಿ, ಮೇ 13 : ಕೊಡಗು ಜಿಲ್ಲಾ ಬಂಟರ ಯುವ ಘಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಂಟ ಸಮುದಾಯ ಬಾಂಧವರ 6ನೇ ವರ್ಷದ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿಯ ವಿರಾಟ್ ರೈ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಮಲ್ನಾಡ್ ಬಂಟ್ಸ್ ವೀರಾಜಪೇಟೆ ತಂಡವನ್ನು 50 ರನ್ ಅಂತರದಿಂದ ಮಣಿಸಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ರೈ ತಂಡ 6 ಓವರ್ನಲ್ಲಿ 121 ರನ್ ಬಾರಿಸಿತು. ತಂಡದ ಪರ ರೇಣುಕಾ ಪ್ರಸಾದ್ ವೈಯಕ್ತಿಕ 66 ರನ್, ನಿಖಿಲ್ 43 ರನ್ ಗಳಿಸಿ ಬೃಹತ್ ಮೊತ್ತ ಪೇರಿಸಲು ನೆರವಾದರು. ಗುರಿ ಬೆನ್ನತ್ತಿದ ಮಲ್ನಾಡ್ ಬಂಟ್ಸ್ ತಂಡ ನಿಗದಿತ ಓವರ್ನಲ್ಲಿ 72 ರನ್ ಗಳಿಸಲು ಮಾತ್ರ ಶಕ್ತವಾಗಿ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಇದಕ್ಕೂ ಮುನ್ನ ನಡೆದ ಸೆಮಿಫೈನಲ್ನಲ್ಲಿ ಯಂಗ್ ಬಂಟ್ ಪ್ಯಾಂಥರ್ಸ್ ಕೈಕೇರಿ ತಂಡವನ್ನು ಮಣಿಸಿ ಮಲ್ನಾಡ್ ಬಂಟ್ಸ್ ತಂಡ ಫೈನಲ್ಗೆ ಅರ್ಹತೆ ಪಡೆದರೆ, ರೈ ಬ್ರದರ್ಸ್ ನೀಲ್ಮಾಡು ತಂಡವನ್ನು ಸೋಲಿಸಿ ವಿರಾಟ್ ರೈ ತಂಡ ಫೈನಲ್ ಪ್ರವೇಶಿಸಿತು.
ಮಹಿಳೆಯರ ವಿಭಾಗ ಹಗ್ಗಜಗ್ಗಾಟದಲ್ಲಿ ಅಮೃತಮಯಿ ಮಡಿಕೇರಿ(ಪ್ರ), ಹಾಕತ್ತೂರು ಬಂಟ್ಸ್(ದ್ವಿ), ಥ್ರೋಬಾಲ್ನಲ್ಲಿ ಬಂಟ್ಸ್ ವಾರಿಯರ್ಸ್ ಮೂರ್ನಾಡು(ಪ್ರ), ಅಮೃತಮಯಿ ಮಡಿಕೇರಿ(ದ್ವಿ). ಪುರುಷರ ವಿಭಾಗದ ಹಗ್ಗಜಗ್ಗಾಟದಲ್ಲಿ ಮಲ್ನಾಡ್ ಬಂಟ್ಸ್(ಪ್ರ), ಸಮುದ್ರ ಬಂಟ್ಸ್ ಎ(ದ್ವಿ),
(ಮೊದಲ ಪುಟದಿಂದ) ವಾಲಿಬಾಲ್ನಲ್ಲಿ ಸಮುದ್ರ ಫ್ರೆಂಡ್ಸ್ ಎ(ಪ್ರ), ಸುಪ್ರಿಂ ಬಂಟ್ಸ್ ಮಡಿಕೇರಿ(ದ್ವಿ) ಸ್ಥಾನ ಪಡೆಯಿತು.
5 ವರ್ಷದೊಳಗಿನ ಮಕ್ಕಳಿಗೆ ನಡೆದ ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಹಂಸಿಕ ರೈ(ಪ್ರ), ಹಿತಶ್ರೀ ರೈ(ದ್ವಿ), ಮಾನ್ವಿತ್ ರೈ(ತೃ). ಕಪ್ಪೆ ಜಿಗಿತ(ಬಾಲಕರು) ವಿಶಿಷ್ಠ ರೈ(ಪ್ರ), ತರುಣ್ ರೈ(ದ್ವಿ), ರಶ್ಮಿನ್ ಬಿ. ರೈ(ತೃ). ಬಾಲಕಿಯರ ವಿಭಾಗದಲ್ಲಿ ಅಂಕಿತ ರೈ(ಪ್ರ), ಅನನ್ಯ ರೈ(ದ್ವಿ), ಹಿತಾ ಶೆಟ್ಟಿ(ತೃ). ಬಾಲಕರ 50 ಮೀ. ಓಟ : ಸಮರ್ಥ ರೈ(ಪ್ರ), ರೋಹನ್ ರೈ(ದ್ವಿ), ರಷ್ಮಿನ್ ರೈ(ತೃ). ಬಾಲಕಿಯರ ವಿಭಾಗ : ತನ್ಯ ರೈ(ಪ್ರ), ಲತಾಕ್ಷ ರೈ(ದ್ವಿ), ನಿಷ್ಮಿತ ರೈ(ತೃ). ಪ್ರಾಥಮಿಕ ಶಾಲಾ ಬಾಲಕರ 100 ಮೀ. ಓಟ : ವಿನ್ಯಾಸ್ ರೈ(ಪ್ರ), ಯೋಗೇಶ್ ರೈ(ದ್ವಿ), ಪ್ರಜ್ವಲ್ ರೈ, ನವನೀತ್ ರೈ(ತೃ). ಬಾಲಕಿಯರ ವಿಭಾಗ : ಪ್ರಾಪ್ತಿ ಪಿ. ರೈ(ಪ್ರ), ಪ್ರತೀಕ್ಷ ರೈ(ದ್ವಿ), ಮುಕ್ತ ಶೆಟ್ಟಿ(ತೃ). ಪ್ರೌಢಶಾಲೆ ಬಾಲಕರ ವಿಭಾಗದ 100 ಮೀ. ಓಟ : ಮನೀಶ್ ರೈ(ಪ್ರ), ಹರ್ಷಿತ್ ಶೆಟ್ಟಿ(ದ್ವಿ), ಲಿಯಾನ್ ರೈ(ತೃ). ಬಾಲಕಿಯರ ವಿಭಾಗ : ಭೂಮಿಕಾ ಶೆಟ್ಟಿ(ಪ್ರ), ಸುಶ್ಮಿತಾ ರೈ(ದ್ವಿ), ಸೃಷ್ಠಿ ರೈ(ತೃ).
60 ವರ್ಷ ಮೇಲ್ಪಟ್ಟವರ 100 ಮೀ. ಓಟ(ಪುರುಷರು) : ಜನಾರ್ದನ ರೈ ಪೋರಬೈಲು(ಪ್ರ), ಜಗನ್ನಾಥ್ ಶೆಟ್ಟಿ(ದ್ವಿ), ಶೇಖರ್ ಶೆಟ್ಟಿ(ತೃ). ಮಹಿಳೆಯರ ವಿಭಾಗ : ವೇದಾವತಿ ಶೆಟ್ಟಿ(ಪ್ರ), ಶಶಿಕಲಾ ಶೆಟ್ಟಿ(ದ್ವಿ), ದೇವಕಿ ರೈ(ತೃ).
ಭಾರದ ಗುಂಡು ಎಸೆತ(ಪುರುಷರು) : ರಮೇಶ್ ರೈ(ಪ್ರ), ಯೋಗೇಶ್ ಶೆಟ್ಟಿ(ದ್ವಿ), ಪ್ರಕಾಶ್ ರೈ(ತೃ). ಮಹಿಳೆಯರ ವಿಭಾಗ : ಗೀತಾ ರೈ(ಪ್ರ), ರಶ್ಮಿ ರೈ(ದ್ವಿ), ಶೀತಲ್ ಶೆಟ್ಟ(ತೃ). ಮಹಿಳೆಯರ ವಿಭಾಗದ ಸಂಗೀತ ಕುರ್ಚಿ : ಸವಿತಾ ಸತೀಶ್ ರೈ(ಪ್ರ), ಶಶಿಕಲಾ ರೈ ಗೋಣಿಕೊಪ್ಪಲು(ದ್ವಿ), ರುಕ್ಮಿಣಿ ರೈ ಮೂರ್ನಾಡು(ತೃ).
ಸನ್ಮಾನ, ಬಹುಮಾನ ವಿತರಣೆ
ಸಂಜೆ ಕೊಡಗು ಜಿಲ್ಲಾ ಬಂಟರ ಸಂಘದÀ ಗೌರವಾಧ್ಯಕ್ಷ ಐತಪ್ಪ ರೈ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪ ಸಮಾರಂಭವನ್ನು ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ನಾರಾಯಣ ರೈ ಉದ್ಘಾಟಿಸಿದರು. ವಿವಿಧ ಕ್ಷೇತ್ರದ ಸಾಧಕರಾದ ಸಮಾಜ ಸೇವಕ ಉಮೇಶ್ ಶೆಟ್ಟಿ ಎಂ.ಬಿ. ಮಂದಾರ್ತಿ, ಮುಖ್ಯಮಂತ್ರಿ ಪದಕ ವಿಜೇತ ಎಎಸ್ಐ ಬಿ.ಕೆ. ಸುರೇಶ್ ರೈ, ಉದ್ಯಮಿ ಐತಪ್ಪ ರೈ, 'ಪ್ರಕೃತಿ ಮುನಿದ ಹಾದಿಯಲ್ಲಿ...' ಕೃತಿ ಬರೆದ ಪತ್ರಕರ್ತ ಕಿಶೋರ್ ರೈ ಕತ್ತಲೆಕಾಡು, ಮಂಗಳೂರು ವಿವಿ(ಬಯೋಕೆಮಿಸ್ಟ್ರಿ) ಚಿನ್ನದ ಪದಕ ವಿಜೇತೆ ನವ್ಯಾ ವಿಕಾಸ್ ರೈ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಮುದಾಯದ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದವು.
ಉತ್ತಮ ಬ್ಯಾಟ್ಸ್ಮನ್ : ರೇಣುಕಾ ಪ್ರಸಾದ್(ವಿರಾಟ್ ರೈ), ಬೆಸ್ಟ್ ಬೌಲರ್ : ಮಿಥುನ್ ರೈ(ಮಲ್ನಾಡ್ ಬಂಟ್ಸ್) ಮ್ಯಾನ್ ಆಫ್ ದಿ ಸಿರೀಸ್ : ನಿತಿನ್ ಆಳ್ವಾ(ಯಂಗ್ ಬಂಟ್ ಪ್ಯಾಂಥರ್ಸ್) ಪ್ರಶಸ್ತಿ ಪಡೆದುಕೊಂಡರು.