ಗೋಣಿಕೊಪ್ಪ ವರದಿ, ಮೇ 10 : ಅರಣ್ಯದಿಂದ ಗ್ರಾಮಕ್ಕೆ ಬಂದಿದ್ದ ಕಾಡುಕೋಣ ಮರಿಯನ್ನು ಮತ್ತೂರು ಗ್ರಾಮಸ್ಥರು ರಕ್ಷಿಸಿದ್ದಾರೆ.

ಗುರುವಾರ ಮತ್ತೂರು ಗ್ರಾಮದ ರವಿ ಎಂಬವರ ಗದ್ದೆಯಲ್ಲಿ ಕಾಣಿಸಿಕೊಂಡಿದ್ದ ಸುಮಾರು 1 ವರ್ಷ ಪ್ರಾಯದ ಗಂಡು ಕಾಡುಕೋಣ ಮರಿಯನ್ನು ಗ್ರಾಮಸ್ಥರು ಹಿಡಿದರು. ಮರಿಯ ಸುತ್ತ ಸಾಕು ನಾಯಿಗಳು ಬೊಗಳುತ್ತಿದ್ದ ಕಾರಣ ಮರಿ ಹೆದರಿ ದಿಕ್ಕು ಕಾಣದೆ ಪರಿತಪಿಸುತ್ತಿತ್ತು ಇದನ್ನು ಕಂಡ ಗ್ರಾಮಸ್ಥರು ಹಿಡಿದು ಕಟ್ಟಿ ಹಾಕಿದ್ದರು. ನಂತರ ಪೆÇನ್ನಂಪೇಟೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ನಂತರ ತಿತಿಮತಿ ಅರಣ್ಯಕ್ಕೆ ಬಿಡಲಾಯಿತು. ಗ್ರಾಮಸ್ಥರುಗಳಾದ ಸನ್ನಿ, ವಿನು, ರವಿ ಇತರರು ಪಾಲ್ಗೊಂಡಿದ್ದರು.