ಗೋಣಿಕೊಪ್ಪಲು, ಮೇ 4 : ಇಲ್ಲಿಗೆ ಸಮೀಪ ಹಾತೂರು ಗ್ರಾ.ಪಂ.ವ್ಯಾಪ್ತಿಯ ಕೈಕೇರಿ ಗ್ರಾಮದ ಗುಡ್ಡೆಮನೆ ಮಾಲೀಕ ವಿ.ಟಿ.ವಾಸು ಎಂಬವರ ತೋಟಕ್ಕೆ ಕಾಡಾನೆಗಳ ಹಿಂಡು ತಾ.3 ರಂದು ರಾತ್ರಿ ನುಸುಳಿದ್ದು, ಲಕ್ಷಾಂತರ ರೂ.ಮೌಲ್ಯದ ಬಾಳೆ ಹಾಗೂ ಅಡಿಕೆ ಗಿಡಗಳು ನಷ್ಟವಾಗಿದೆ.

ಸುಮಾರು 2 ಎಕರೆ ಜಾಗದಲ್ಲಿ ಬಾಳೆ ,ಅಡಿಕೆ ಇತ್ಯಾದಿ ಕೃಷಿ ಮಾಡಿದ್ದು ನಿನ್ನೆ ರಾತ್ರಿ ಮೂರು ಕಾಡಾನೆ ಹಿಂಡುಗಳು ತೋಟಕ್ಕೆ ನುಸುಳಿ ನಷ್ಟಪಡಿಸಿವೆ.

ಕಳೆದ 5 ವರ್ಷದಿಂದ ಈ ಭಾಗಕ್ಕೆ ನಿರಂತರ ಕಾಡಾನೆಗಳು ದಾಳಿ ಮಾಡುತ್ತಿದ್ದು ಕಾವೇರಿ ಕಾಲೇಜು ಹಿಂಭಾಗವೇ ವಾಸು ಅವರ ತೋಟವಿದೆ.