ಮಡಿಕೇರಿ, ಏ. 14: ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ತಾ. 17 ರಂದು ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳನ್ನು ಕೇಂದ್ರ ಸ್ಥಾನದಿಂದ ಕೆಎಸ್‍ಆರ್‍ಟಿಸಿ ಬಸ್ ಮೂಲಕ ಮಸ್ಟರಿಂಗ್ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಜಿಲ್ಲಾಡಳಿತ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಮಾಡಿದೆ.

ಬಸ್ ಮಾರ್ಗದ ವಿವರ :ಮಡಿಕೇರಿ ತಾಲೂಕು ಸಂತ ಮೈಕಲರ ಪ್ರೌಢಶಾಲೆ (ಗಾಂಧಿ ಮೈದಾನ)ದಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಮೂರ್ನಾಡು ಮಾರ್ಗವಾಗಿ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿಗೆ ತಲಪಲಿದೆ. ನಗರದ ಸಂತ ಮೈಕಲರ ಪ್ರೌಢ ಶಾಲೆಯಿಂದ ಬೆಳಿಗ್ಗೆ 5 ಗಂಟೆಗೆ ಬಸ್ ಹೊರಡಲಿದ್ದು, ಬೆಟ್ಟಗೇರಿ, ನಾಪೋಕ್ಲು, ಪಾರಾಣೆ, ಬೆಳ್ಳುಮಾಡು, ಕಡಂಗ, ಕದನೂರು ಮಾರ್ಗವಾಗಿ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಹಾಗೆಯೇ ಮತ್ತೊಂದು ಬಸ್ ಇದೇ ಸ್ಥಳದಿಂದ ಬೆಳಿಗ್ಗೆ 5 ಗಂಟೆಗೆ ಹೊರಡಲಿದ್ದು, ಹಾಕತ್ತೂರು, ಮರಗೋಡು, ಸಿದ್ದಾಪುರ, ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಕರಿಕೆ ಗ್ರಾಮ ಪಂಚಾಯಿತಿ ಕಚೇರಿಯಿಂದ ಬೆಳಿಗ್ಗೆ 5 ಗಂಟೆಗೆ ಬಸ್ ಹೊರಡಲಿದ್ದು, ಭಾಗಮಂಡಲ, ಅಯ್ಯಂಗೇರಿ, ನೆಲಜಿ, ಬಲ್ಲಮಾವಟಿ, ಕಕ್ಕಬೆ, ಚೆಯ್ಯಂಡಾಣೆ ಮಾರ್ಗವಾಗಿ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಸಂತ ಮೈಕಲರ ಪ್ರೌಢಶಾಲೆ ಆವರಣದಿಂದ ಬೆಳಿಗ್ಗೆ 5 ಗಂಟೆಗೆ ಬಸ್ ಹೊರಡಲಿದ್ದು ಕಡಗದಾಳು, ಕತ್ತಲೆಕಾಡು, ಚೆಟ್ಟಳ್ಳಿ, ಸಿದ್ದಾಪುರ, ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಭಾಗಮಂಡಲದಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಭಾಗಮಂಡಲ, ಚೆಟ್ಟಿಮಾನಿ, ಚೇರಂಬಾಣೆ, ಕಾರುಗುಂದ, ಬೆಟ್ಟಗೇರಿ, ಪಾಲೂರು, ಮೂರ್ನಾಡು ಮಾರ್ಗವಾಗಿ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಸಂಪಾಜೆ ನಾಡ ಕಚೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಮದೆನಾಡು, ಕಾಟಕೇರಿ, ಮಡಿಕೇರಿ, ಮೂರ್ನಾಡು ಮಾರ್ಗವಾಗಿ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಭಾಗಮಂಡಲ ನಾಡ ಕಚೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಚೇರಂಬಾಣೆ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ನಾಪೋಕ್ಲು ನಾಡ ಕಚೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಬೆಟ್ಟಗೇರಿ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ಸಂಪಾಜೆ ನಾಡ ಕಚೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಮದೆನಾಡು, ಕಾಟಕೇರಿ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ.

ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಬಸ್ ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆಗೆ ಬಸ್ ಹೊರಡಲಿದ್ದು, ಶನಿವಾರಸಂತೆ, ಸೋಮವಾರಪೇಟೆ, ಮಾದಾಪುರ, ಸುಂಟಿಕೊಪ್ಪ, ಚೆಟ್ಟಳ್ಳಿ, ಸಿದ್ದಾಪುರ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಕುಶಾಲನಗರ ನಾಡ ಕಚೇರಿಯಿಂದ ಬೆಳಿಗ್ಗೆ 5.30 ಗಂಟೆಗೆ ಬಸ್ ಹೊರಡಲಿದ್ದು, ಸಿದ್ದಾಪುರ ಮಾರ್ಗವಾಗಿ ವೀರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಸೋಮವಾರಪೇಟೆ ತಾಲೂಕು ಕಚೇರಿಯಿಂದ ಬೆಳಿಗ್ಗೆ 5.30 ಗಂಟೆಗೆ ಬಸ್ ಹೊರಡಲಿದ್ದು, ಮದಲಾಪುರ, ಕೂಡಿಗೆ, ಕುಶಾಲನಗರ, ಸಿದ್ದಾಪುರ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಶನಿವಾರಸಂತೆ ನಾಡ ಕಚೇರಿಯಿಂದ ಬೆಳಿಗ್ಗೆ 5.30 ಗಂಟೆಗೆ ಬಸ್ ಹೊರಡಲಿದ್ದು, ಅಂಕನಳ್ಳಿ, ಆಲೂರು-ಸಿದ್ದಾಪುರ, ಕುಶಾಲನಗರ, ಸಿದ್ದಾಪುರ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಹೆಬ್ಬಾಲೆಯಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಹೆಬ್ಬಾಲೆ, ಕೂಡಿಗೆ, ಕುಶಾಲನಗರ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಶಿರಂಗಾಲದಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಶಿರಂಗಾಲ, ಹೆಬ್ಬಾಲೆ, ಕುಶಾಲನಗರ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಕುಶಾಲನಗರ ನಾಡ ಕಚೇರಿಯಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಗುಡ್ಡೆಹೊಸೂರು, ನಂಜರಾಯಪಟ್ಟಣ, ನೆಲ್ಲಿಹುದಿಕೇರಿ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಕುಶಾಲನಗರ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಸುಂಟಿಕೊಪ್ಪ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ಸೋಮವಾರಪೇಟೆ ತಾಲೂಕು ಕಚೇರಿಯಿಂದ ಬೆಳಿಗ್ಗೆ 5.30 ಗಂಟೆಗೆ ಬಸ್ ಹೊರಡಲಿದ್ದು, ಮಾದಾಪುರ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ಕುಶಾಲನಗರ ನಾಡ ಕಚೇರಿಯಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಸುಂಟಿಕೊಪ್ಪ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ಕೊಡ್ಲಿಪೇಟೆ ನಾಡ ಕಚೇರಿಯಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಸೋಮವಾರಪೇಟೆ, ಮಾದಾಪುರ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ.

ಶಿರಂಗಾಲದಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಶಿರಂಗಾಲ, ಹೆಬ್ಬಾಲೆ, ಕುಶಾಲನಗರ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ವೀರಾಜಪೇಟೆ ತಾಲೂಕಿಗೆ ಸಂಬಂಧಿಸಿದಂತೆ ವೀರಾಜಪೇಟೆ ಪಟ್ಟಣದ ತಾಲೂಕು ಮೈದಾನದಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಮೂರ್ನಾಡು ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ಶ್ರೀಮಂಗಲ ಬಸ್ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಹುದಿಕೇರಿ, ಗೋಣಿಕೊಪ್ಪ, ವೀರಾಜಪೇಟೆ ಮೂರ್ನಾಡು ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ಕುಟ್ಟ ಬಸ್ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಶ್ರೀಮಂಗಲ, ವೀರಾಜಪೇಟೆ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ಬಾಳೆಲೆ ಕಂದಾಯ ಪರಿವೀಕ್ಷಕರ ಕಚೇರಿಯಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಬಾಳೆಲೆ, ಪೊನ್ನಪ್ಪಸಂತೆ, ಮಾಯಾಮುಡಿ, ಗೋಣಿಕೊಪ್ಪ, ಪಾಲಿಬೆಟ್ಟ, ಸಿದ್ದಾಪುರ, ಚೆಟ್ಟಳ್ಳಿ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ.

ಪೊನ್ನಂಪೇಟೆ ನಾಡ ಕಚೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಗೋಣಿಕೊಪ್ಪ, ಅಮ್ಮತ್ತಿ, ಸಿದ್ದಾಪುರ, ಮರಗೋಡು, ಹಾಕತ್ತೂರು ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ವೀರಾಜಪೇಟೆ, ಮೂರ್ನಾಡು ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ.

ತಿತಿಮತಿ ಜಂಕ್ಷನ್‍ನಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಗೋಣಿಕೊಪ್ಪ, ಅಮ್ಮತ್ತಿ, ಸಿದ್ದಾಪುರ, ನೆಲ್ಲಿಹುದಿಕೇರಿ, ಚೆಟ್ಟಳ್ಳಿ ಮಾರ್ಗವಾಗಿ ನಗರದ ಸಂತ ಜೋಸೆಫರ ಕಾನ್ವೆಂಟ್ ತಲಪಲಿದೆ. ಶ್ರೀಮಂಗಲ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಹುದಿಕೇರಿ, ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಕುಟ್ಟ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಕುಟ್ಟ, ಕಾನೂರು, ಪೊನ್ನಂಪೇಟೆ, ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಬಾಳೆಲೆ ಕಂದಾಯ ಪರಿವೀಕ್ಷಕರ ಕಚೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಬಾಳೆಲೆ, ಪೊನ್ನಪ್ಪಸಂತೆ, ಮಾಯಾಮುಡಿ, ಗೋಣಿಕೊಪ್ಪ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಪೊನ್ನಂಪೇಟೆ ನಾಡ ಕಚೇರಿಯಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಗೋಣಿಕೊಪ್ಪ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಗೋಣಿಕೊಪ್ಪ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಗೋಣಿಕೊಪ್ಪ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ತಿತಿಮತಿ ಜಂಕ್ಷನ್‍ನಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಗೋಣಿಕೊಪ್ಪ, ಬಿಟ್ಟಂಗಾಲ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ.

ಸುಳ್ಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ ಬಸ್ ಹೊರಡಲಿದ್ದು, ಸುಳ್ಯ, ಪೆರಾಜೆ, ಸಂಪಾಜೆ, ಜೋಡುಪಾಲ, ಮದೆನಾಡು, ಮಡಿಕೇರಿ ಮಾರ್ಗವಾಗಿ ವೀರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜು ತಲಪಲಿದೆ. ಸುಳ್ಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 6.30 ಗಂಟೆಗೆ ಬಸ್ ಹೊರಡಲಿದ್ದು, ಸುಳ್ಯ, ಪೆರಾಜೆ, ಸಂಪಾಜೆ, ಜೋಡುಪಾಲ, ಮದೆನಾಡು ಮಾರ್ಗವಾಗಿ ನಗರದ ಸಂತ ಜೋಸೆಫರ ಶಾಲೆ ತಲಪಲಿದೆ. ಒಟ್ಟಾರೆ ತಾ. 17 ರಂದು ನಡೆಯುವ ಮಸ್ಟರಿಂಗ್ ಕಾರ್ಯಕ್ಕಾಗಿ ಮತಗಟ್ಟೆ ಅಧಿಕಾರಿಗಳನ್ನು ಮಸ್ಟರಿಂಗ್ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಒಟ್ಟು 60 ಬಸ್‍ಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.