ಮಡಿಕೇರಿ, ಏ. 11: ಸ್ವಚ್ಛ, ಪ್ರಾಮಾಣಿಕ ಮತ್ತು ಜನಪರವಾದ ರಾಜಕಾರಣದ ಸಲುವಾಗಿ ಅಸ್ತಿತ್ವಕ್ಕೆ ತರಲಾಗಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ಮೈಸೂರು-ಕೊಡಗು ಕ್ಷೇತ್ರ ಸೇರಿದಂತೆ 12 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವದಾಗಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಂಡು ಬರುತ್ತಿರುವ ವಿವಿಧ ರಾಜಕೀಯ ಪಕ್ಷಗಳ ಜನವಿರೋಧಿ ನಿಲುವುಗಳು, ಭ್ರಷ್ಟಾಚಾರ, ವಂಶಪಾರಂಪರ್ಯವಾದ ಆಡಳಿತವನ್ನು ಧಿಕ್ಕರಿಸಿ, ಭ್ರಷ್ಟಾಚಾರ ರಹಿತವಾದ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರುವ ಧ್ಯೇಯೋದ್ದೇಶಗಳಿಂದ, ಪಕ್ಷವನ್ನು ಜನರಿಗೆ ಪರಿಚಯಿಸುವ ಉದ್ದೇಶಗಳ ಹಿನ್ನೆಲೆ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದೆಯೆಂದು ಸ್ಪಷ್ಟಪಡಿಸಿದರು. ಮೈಸೂರು-ಕೊಡಗು ಕ್ಷೇತ್ರಕ್ಕೆ ಕೆ.ಎಸ್. ಸೋಮ ಸುಂದರಂ ಅವರನ್ನು ಕಣಕ್ಕಿಳಿಸ ಲಾಗಿದೆ. ಕರ್ನಾಟಕ ರಾಷ್ಟ್ರ ಸಮಿತಿಯು ಒಂದು ಪಕ್ಷವಾಗಿ ರಾಷ್ಟ್ರೀಯ ಚುನಾವಣಾ ಆಯೋಗ ದಲ್ಲಿ ನೋಂದಣಿ ಮಾಡಿಕೊಳ್ಳುವ ಪ್ರಕ್ರಿಯೆ ಅಂತಿಮ ಹಂತÀದಲ್ಲಿ ರುವದಾಗಿ ತಿಳಿಸಿದರು. ಕೊಡಗಿನ ಪರಿಸ್ಥಿತಿಗಳಿಗೆ ಜೆಸಿಬಿ ಕಾರಣ- ಕಳೆದ ಸಾಲಿನ ಪ್ರಾಕೃತಿಕ ವಿಕೋಪದ ಬಳಿಕ ಜಿಲ್ಲೆಯ ಅಭಿವೃದ್ಧಿಗೆ ಪೂರಕ ವಾದ ಕಾರ್ಯಗಳು ನಡೆಯದಿರು ವದಕ್ಕೆ, ಜಿಲ್ಲೆ ಕಡೆಗಣಿಸಲ್ಪಡು ತ್ತಿರುವದಕ್ಕೆ ರಾಜ್ಯದಲ್ಲಿನ ಜೆಸಿಬಿ (ಜನತಾದಳ, ಕಾಂಗ್ರೆಸ್, ಬಿಜೆಪಿ) ಕಾರಣವೆಂದು ತೀಕ್ಷ್ಣವಾಗಿ ನುಡಿದ ಕೃಷ್ಣಾ ರೆಡ್ಡಿ, ಸ್ವಜನಪಕ್ಷಪಾತ, ವಂಶ ಪಾರಂಪರ್ಯ ರಾಜಕಾರಣಗಳಿಂದ ಇಂದು ಯಾವದೇ ಪಕ್ಷದಿಂದ ಚುನಾವಣಾ ಸ್ಪರ್ಧೆಗೆ ಅಭ್ಯರ್ಥಿಗಳು ಮೊದಲೇ ನಿಗದಿಯಾಗಿರುತ್ತಾರೆಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿ ಸೋಮಸುಂದರ್ ಮಾತನಾಡಿ, ಭ್ರಷ್ಟಾಚಾರ ಮುಕ್ತವಾದ ವ್ಯವಸ್ಥೆಯನ್ನು ಸಮಾಜದಲ್ಲಿ ಕಾಣುವ ಸಲುವಾಗಿ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿರುವದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎಸ್., ಸಾಹಿತಿ ಮತ್ತು ರೈತ ಮುಖಂಡ ಜೋಗನಹಳ್ಳಿ ಗುರು ಮೂರ್ತಿ, ಮೋಹನ್ ಪರ್ಲಕೋಟಿ, ಮಂಜುಳಾ ಉಪಸ್ಥಿತರಿದ್ದರು.