ಗೋಣಿಕೊಪ್ಪ ವರದಿ, ಏ. 2: ಇಲ್ಲಿನ ಹರಿಶ್ಚಂದ್ರಪುರ ಶ್ರೀ ಕಿಲೇರಿ ಮುತ್ತಪ್ಪ ಮಠಪುರ ಟ್ರಸ್ಟ್ ವತಿಯಿಂದ ಮುತ್ತಪ್ಪ ದೇವರ ಉತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.

ಪ್ರತಿಷ್ಠಾ ದಿನಾಚರಣೆ ಮೂಲಕ ಆರಂಭಗೊಂಡ ಉತ್ಸವದಲ್ಲಿ ಮುತ್ತಪ್ಪನ್ ವೆಳ್ಳಾಟಂ, ಮುತ್ತಪ್ಪ ದೇವರ ತೆರೆ, ಕಾರಣೋರ್ ವೆಳ್ಳಾಟಂ, ಗುಳಿಗನ್, ಕಂಡಾಕರ್ಣನ್, ವಸೂರಿಮಾಲಾ, ವಿಷ್ಣುಮೂರ್ತಿ, ಪೋದಿ, ತಿರುವಪ್ಪನ ವೆಳ್ಳಾಟಂ ಹಾಗೂ ಕಲಶ ಸ್ವಾಗತಂ ನಡೆಯಿತು.

ಕೊನೆಯ ದಿನದಂದು ಗುಳಿಗನ್ ತೆರೆ, ಕಂಡಾಕರ್ಣನ್ ತೆರೆ, ತಿರುವಪ್ಪನ್, ಪೋದಿ, ಕಾರಣೀರ್‍ತೆರೆ, ವಸೂರಿಮಾಲಾ ಹಾಗೂ ವಿಷ್ಣುಮೂರ್ತಿ ತೆರೆ ಮೂಲಕ ಸಂಪನ್ನಗೊಂಡಿತು. ಶ್ರೀ ಕಿಲೇರಿ ಮುತ್ತಪ್ಪ ಮಠಪುರ ಟ್ರಸ್ಟ್ ಪ್ರಮುಖರುಗಳಾದ ಜಯೇಂದ್ರ, ಸಂಜಿತ್, ರಾಜಿತ್ ಮುಂದಾಳತ್ವದಲ್ಲಿ ಉತ್ಸವ ನಡೆಯಿತು.