ಗುಡ್ಡೆಹೊಸೂರು, ಮಾ. 21: ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ಶಾಸ್ತ್ರದ ಸ್ನಾತಕೋತ್ತರ ವಿಭಾಗದಲ್ಲಿ ಕೊಡಗಿನ ಮೊಟ್ಟನ ನಿಖಿಲ್ 4 ಚಿನ್ನದ ಪದಕ ಗಳಿಸುವದರ ಮೂಲಕ ಸಾಧನೆ ಮಾಡಿದ್ದಾನೆ.

ಮೈಸೂರು ವಿಶ್ವವಿದ್ಯಾನಿಲಯದ 99ನೇ ಘಟಿಕೋತ್ಸವದಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.

ಈತ ಹಾರಂಗಿ ಅತ್ತೂರು ಗ್ರಾಮದ ಮೊಟ್ಟನ ನಾಗರಾಜ್ ಮತ್ತು ಗಾಯಿತ್ರಿ ದಂಪತಿಯ ಪುತ್ರ. ವಾಣಿಜ್ಯ ಶಾಸ್ತ್ರದ ಸ್ನಾತಕೋತ್ತರ ವಿಭಾಗದಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ಶ್ರೇಣಿಗಳಿಸಿರುವ ಕಾರಣ 3 ಚಿನ್ನದ ಪದಕ, ನಗದು ಬಹುಮಾನ, ವೆಚ್ಚ ಮತ್ತು ಲೆಕ್ಕ ನಿರ್ವಹಣೆ ವಿಶೇಷ ಅಧ್ಯಯನಕ್ಕಾಗಿ ಒಂದು ಚಿನ್ನದ ಪದಕ ಲಭಿಸಿದೆ. ಈ ಹಿಂದೆ ವಾಣಿಜ್ಯ ವಿಭಾಗದಲ್ಲಿ ಗರಿಷ್ಠ 2 ಚಿನ್ನದ ಪದಕಗಳಿಸಿದ ವಿದ್ಯಾರ್ಥಿಯ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾನೆ.