ಸಿದ್ದಾಪುರ, ಮಾ. 10: ಜಿಲ್ಲಾ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶಿವರಾತ್ರಿ ಮಹೋತ್ಸವದ ಅಂಗವಾಗಿ ವೀರಾಜಪೇಟೆಯ ಸ್ವರ್ಣವ ಸಂಗೀತ ಶಾಲೆಯ ಮುಖ್ಯಸ್ಥ ಬಿ.ಎಸ್. ದಿಲಿಕುಮಾರ್ ಹಾಗೂ ತಂಡದಿಂದ ಗೋಣಿಕೊಪ್ಪದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.

ಗೋಣಿಕೊಪ್ಪಲುವಿನ ಸೌಖ್ಯ ಸಭಾಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದಲ್ಲಿ ದೇವರ ನಾಮಗಳು ಹಾಗೂ ದೇವರ ಕೀರ್ತನೆಗಳು ಮೂಡಿಬಂದಿತು. ಕಾರ್ಯಕ್ರಮ ಶಿವ ಪೂಜೆಯೊಂದಿಗೆ ಪ್ರಾರಂಭವಾಯಿತು. ಸಭಾ ಕಾರ್ಯಕ್ರಮದಲ್ಲಿ ಉದ್ಯಮಿ ಕೇಶವ ಕಾಮತ್ ಹಾಗೂ ಪೊನ್ನಂಪೇಟೆಯ ಸಿ.ಐ.ಟಿ. ಕಾಲೇಜಿನ ಪ್ರಾಂಶುಪಾಲೆ ಡಾ. ರೋಹಿಣಿ ಹಾಗೂ ವೈದ್ಯ ಡಾ. ಬೆಳ್ಳಿಯಪ್ಪ ಇನ್ನಿತರರು ಹಾಜರಿದ್ದರು. ರೀನಾ ಮಾಚಯ್ಯ ನಿರೂಪಿಸಿ, ಕೃತಿಮಾ ವಂದಿಸಿದರು.