ಕರಿಕೆ, ಫೆ. 25: ಇಲ್ಲಿಗೆ ಸಮೀಪದ ಬಾಚಿಮಲೆ ಎಂಟನೇ ಮೈಲು ಎಂಬಲ್ಲಿ ಭಾಗಮಂಡಲ- ಕರಿಕೆ ಅಂತರರಾಜ್ಯ ಹೆದ್ದಾರಿಯಲ್ಲಿ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆಯೊಂದು ವ್ಯಕ್ತಿ ಮೇಲೆ ಧಾಳಿ ಮಾಡಿದ ಘಟನೆ ನಡೆದಿದೆ.ಕರಿಕೆ ಎಳ್ಳು ಕೊಚ್ಚಿ ನಿವಾಸಿ ಕಮಲಾಕ್ಷ ಎಂಬವರು ತಮ್ಮ ಬೈಕಿನಲ್ಲಿ ಭಾಗಮಂಡಲ ಕಡೆ ಪ್ರಯಾಣಿಸುತ್ತಿದ್ದಾಗ ತಲಕಾವೇರಿ ವನ್ಯಧಾಮದ ಎಂಟನೇಮೈಲು ಎಂಬಲ್ಲಿ ರಸ್ತೆ ತಿರುವಿನಲ್ಲಿ ಬೈಕ್ ಮೇಲೆ ಆನೆ ಧಾಳಿಮಾಡಿದ್ದು ಇದರಿಂದ ಕಮಲಾಕ್ಷರವರ ಕಾಲು ಹಾಗೂ ತಲೆಯಭಾಗಕ್ಕೆ ಏಟಾಗಿದ್ದು, ಭಾಗಮಂಡಲ ವಲಯದ ಅರಣ್ಯ ಸಿಬ್ಬಂದಿಗಳು ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಉಪ ವಲಯ ಅರಣ್ಯಾಧಿಕಾರಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.