ಮಡಿಕೇರಿ, ಫೆ. 22: ಇತ್ತೀಚೆಗೆ ನಿಧನರಾದ ಮುಖ್ಯ ಶಿಕ್ಷಕ ಕೇಶವ ಪೆರಾಜೆ ಜ್ಞಾಪಕಾರ್ಥವಾಗಿ ವರ್ಷಕ್ಕೆ ಒಂದು ಬಾರಿ ಕಾರ್ಯಕ್ರಮ ಆಯೋಜಿಸಲು ಪಯಸ್ವಿನಿ ಬಳಗ ರಚನೆಯಾಗಿದೆ. ಪೆರಾಜೆಯ ಅನ್ನಪೂರ್ಣೇಶ್ವರಿ ಕಲಾ ಮಂದಿರದಲ್ಲಿ ನಡೆದ ಸಭೆಯಲ್ಲಿ ಬಳಗವನ್ನು ರಚಿಸಲಾಯಿತು. ಸಮಿತಿ ಅಧ್ಯಕ್ಷರಾಗಿ ನಾಗೇಶ್ ಕುಂದಲ್ಪಾಡಿ, ಕಾರ್ಯದರ್ಶಿಯಾಗಿ ರೇಖಾ, ಖಜಾಂಚಿಯಾಗಿ ಕೆ.ಎಂ. ಜಯಪ್ರಕಾಶ್, ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಮುಡ್ಕಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ 12 ಮಂದಿ ಆಯ್ಕೆಯಾದರು.