ವೀರಾಜಪೇಟೆ, ಫೆ. 21: ತಮ್ಮ ಮಾತೃ ಭಾಷೆ ಎಂಬ ಪದದ ಮಹತ್ವ ವನ್ನು ತಾಯಂದಿಯರು ಅರಿತು ಕೊಂಡು ಭಾಷೆ ಮತ್ತು ಸಂಸ್ಕøತಿ ಯನ್ನು, ಆಚಾರ-ವಿಚಾರ, ಪದ್ಧತಿ ಪರಂಪರೆಯನ್ನು ಉಳಿಸಬೇಕು. ಏಕೆಂದರೆ ಇಂದು ವಿಶ್ವದ ಅಳಿವಿನ ಭಾಷೆಯಲ್ಲಿ ಕೊಡವ ಭಾಷೆ ಸಹ ಒಂದು. ಭಾಷೆ ಅಳಿದರೆ ಇದರಿಂದ ಒಂದು ಜನಾಂಗವೇ ನಾಶವಾಗಿ ಹೋಗುತ್ತದೆ ಎಂಬದನ್ನು ಅರಿತುಕೊಳ್ಳಬೇಕು ಎಂದು ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಹೇಳಿದರು.

ಅಖಿಲ ಕೊಡವ ಸಮಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ನಮ್ಮ ಸಂಸ್ಕøತಿ ಹಾಗೂ ಹೆಣ್ಣು ಮಕ್ಕಳು’ ಎಂಬ ವಿಚಾರ ಸಂಕಿರಣ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗಿನಲ್ಲಿ ಹಿಂದಿನ ಕಾಲದಿಂದ ಹೆಣ್ಣು ಮಕ್ಕಳಿಗೆ ಮಹತ್ವದ ಸ್ಥಾನ ನೀಡಿದ ಹೆಗ್ಗಳಿಕೆ ಕೊಡವ ಜನಾಂಗದ್ದಾಗಿದೆ. ಈ ವಿಶಿಷ್ಠತೆಯಿಂದ ಅಂದಿನ ಕಾಲದಲ್ಲಿ ಚೊನೀರ ಮುತ್ತಮ ಸೇರಿದಂತೆ ಅನೇಕ ಮಹಿಳೆಯರು ಉನ್ನತ ಸ್ಥಾನಕ್ಕೆ ಏರಿದರು. ದೇಶ-ವಿದೆÉೀಶದಲ್ಲಿ ನಮ್ಮ ಹೆಣ್ಣು ಮಕ್ಕಳು ಕ್ರೀಡೆ ಸೇರಿದಂತೆ ವಿವಿಧ ರಂಗದಲ್ಲಿ ಸಾಧನೆ ಮಾಡುತ್ತಿದ್ದಾರೆ. ಆದರೆ ಇಂದು ಅಚಾರ ವಿಚಾರ, ಪದ್ಧತಿ ಪರಂಪರೆ, ಭಾಷೆ, ಹಿರಿಯರಿಗೆ ಗೌರ ನೀಡುವದು ಎಲ್ಲವೂ ಮರೆಯಾಗಿದೆ ಎಂದು ವಿಷಾದಿಸಿದರು. ಸಮಾರಂಭದಲ್ಲಿ ಅತಿಥಿಗಳಾಗಿದ್ದ ಅಖಿಲ ಕೊಡವ ಸಮಾಜದ ಉಪಾಧ್ಯಕ್ಷ ಅಜ್ಜಿಕುಟ್ಟಿರ ಸುಬ್ರಮಣಿ ಮಾತನಾಡಿದರು. ನಿನಾದ ನೃತ್ಯ ಮತ್ತು ಸಂಗೀತ ಸಂಸ್ಥೆಯ ಚೇಂದೀರ ನಿರ್ಮಲ ಬೋಪಣ್ಣ ‘ನಮ್ಮ ಸಂಸ್ಕøತಿ ಹಾಗೂ ಹೆಣ್ಣು ಮಕ್ಕಳು’ ಎಂಬ ಪ್ರಬಂಧ ಮಂಡಿಸಿದರು. ದ್ವಿಭಾಷ ಸಾಹಿತಿ ಮಂಡೇಪಂಡ ಗೀತಾ ಮಂದಣ್ಣ ಮತ್ತು ಪೊನ್ನಂಪೇಟೆಯ ನಿನಾದ ನೃತ್ಯ ಮತ್ತು ಸಂಗೀತ ಸಂಸ್ಥೆಯ ಚೇಂದಿರ ನಿರ್ಮಲ ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು.