ಮಡಿಕೇರಿ, ಫೆ. 20: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಟಿ. ಶೆಟ್ಟಿಗೇರಿ ತಾವಳಗೇರಿ ಮೂಂದ್‍ನಾಡು ಕೊಡವ ಸಮಾಜ, ಟಿ. ಶೆಟ್ಟಿಗೇರಿ ಸಾರ್ವಜನಿಕ ಗೌರಿ ಗಣೇಶ ಸೇವಾ ಸಮಿತಿ ಮತ್ತು ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಸಾಂಸ್ಕøತಿಕ ಸಂಸ್ಥೆ ಇವರ ಸಹಯೋಗದಲ್ಲಿ ತಾ. 25 ರಂದು ತಾವಳಗೇರಿ ಮೂಂದ್‍ನಾಡು ಕೊಡವ ಸಮಾಜದಲ್ಲಿ ಪುದಿಯಕ್ಕಿ ಕೂಳುಂಬೊ ಪಿಂಞ ಆಟ್-ಪಾಟ್ ಆಕೀರಿ ಸಮಾರಂಭ ನಡೆಯಲಿದೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಕೆ. ಪೊನ್ನಪ್ಪ, ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, ನಿವೃತ್ತ ಮುಖ್ಯೋಪಾದ್ರಿ ಚೊಟ್ಟೆಯಂಡಮಾಡ ಎಸ್. ಚಂಗಪ್ಪ, ಜಿ.ಪಂ. ಮಾಜಿ ಸದಸ್ಯರಾದ ಕೊಂಡಿಂಜಮ್ಮನ ಎಂ. ಬಾಲಕೃಷ್ಣ, ಕೊಡವ ಜಾನಪದ ಆಟ್-ಪಾಟ್ ತಜ್ಞ ಕಾಳಿಮಾಡ ಎಂ. ಮೋಟಯ್ಯ ಇತರರು ಪಾಲ್ಗೊಳ್ಳಲಿದ್ದಾರೆ.