ಶ್ರೀಮಂಗಲ, ಫೆ. 14: ಬಿರುನಾಣಿ- ಹುದಿಕೇರಿ ನಡುವಿನ ಸಂಪರ್ಕ ರಸ್ತೆ (ಹೈಸೊಡ್ಲೂರು -ಪೊರಾಡು ಗ್ರಾಮದ ಮೂಲಕ) ನಡುವೆ ನೂತನ ಸೇತುವೆಗೆ ಹೆಚ್ಚುವರಿ ಕಾಂಕ್ರಿಟ್ ಕಾಮಗಾರಿ ಆರಂಭವಾಗಿರುವದರಿಂದ ತಾ.14 ರ ಸಂಜೆಯಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಈ ಮಾರ್ಗದ ಬದಲು ಟಿ. ಶೆಟ್ಟಿಗೇರಿ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.