ಕೂಡಿಗೆ, ಫೆ. 6: ಕೂಡುಮಂಗಳೂರಿನ ಶ್ರೀ ಬಸವೇಶ್ವರ ಯುವಕ ಸಂಘದ ವತಿಯಿಂದ ಪ್ರಥಮ ವರ್ಷದ ವಾಲಿಬಾಲ್ ಪಂದ್ಯಾವಳಿ ಕೂಡುಮಂಗಳೂರು ಬಸವೇಶ್ವರ ಆಟದ ಮೈದಾನದಲ್ಲಿ ಮಾ. 4 ರಂದು ನಡೆಯಲಿದೆ.
ಪ್ರಥಮ ಬಹುಮಾನ ರೂ. 22,222 ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. 12222 ಹಾಗೂ ಟ್ರೋಫಿ ಹಾಗೂ ತೃತೀಯ ಬಹುಮಾನ ರೂ. 7777 ಹಾಗೂ ಟ್ರೋಫಿ ನೀಡಲಾಗುವದು. ವಾಲಿಬಾಲ್ ಪಂದ್ಯಾಟ ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಕೂಡಮಂಗಳೂರು ಹಾಗೂ ಕೂಡಿಗೆ ವ್ಯಾಪ್ತಿಯ ಕ್ರೀಡಾ ಪಟುಗಳಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸುಭಾಷ್ಗೌಡ 8050125034, ವಿನೋದ್ 7411309291 ಸಂಪರ್ಕಿಸಲು ಕೋರಿದೆ.
ಶಿವರಾತ್ರಿ ಪ್ರಯುಕ್ತ ಕೂಡಮಂಗಳೂರು ಗ್ರಾಮದ ಮಹಿಳೆಯರಿಗೆ ಹಗ್ಗಜಗ್ಗಾಟ, ಮ್ಯುಸಿಕಲ್ ಚೇರ್ ಹಾಗೂ ಬಾಂಬ್ ಇನ್ ದಿ ಸಿಟಿ ಆಟೋಟಗಳು ನಡೆಯಲಿದೆ. ಕೂಡಮಂಗಳೂರು ಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಹಬ್ಬದ ವಿಶೇಷ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಲಿದೆ.