ಕುಶಾಲನಗರ, ಫೆ. 6: ಕುಶಾಲನಗರದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ತೆರೆ ಮಹೋತ್ಸವ ಕಾರ್ಯಕ್ರಮ ತಾ.9 ರಿಂದ ಎರಡು ದಿನಗಳ ಕಾಲ ನಡೆಯಲಿದೆ. ಬೈಚನಹಳ್ಳಿಯ ಯೋಗಾನಂದ ಬಡಾವಣೆಯಲ್ಲಿರುವ ದೇವಾಲಯದಲ್ಲಿ ಶ್ರೀ ಮುತ್ತಪ್ಪ ಸೇವಾ ಟ್ರಸ್ಟ್ ಆಶ್ರಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

9 ರಂದು ಬೆಳಗ್ಗೆ 5.30 ಕ್ಕೆ ಗಣಪತಿ ಹೋಮ, 10.30 ಕ್ಕೆ ಧ್ವಜಾರೋಹಣ, ಮಧ್ಯಾಹ್ನ ಮುತ್ತಪ್ಪನ ಮಲೈ ಇರುಕ್ಕಲ್, ಮುತ್ತಪ್ಪನ್ ವೆಳ್ಳಾಟಂ, ಸಂಜೆ 5 ಗಂಟೆಗೆ ತಾಲಪೊಲಿ ಮೆರವಣಿಗೆ, ರಾತ್ರಿ 8 ಗಂಟೆಗೆ ಸಿಡಿಮದ್ದು ಪ್ರದರ್ಶನ, ಅನ್ನದಾನ, ಸಾಂಸ್ಕøತಿಕ ಕಾರ್ಯಕ್ರಮ ಬಳಿ ಕಳಿಗ ಪಾಟು, ಕಳಸ ಆಗಮನ ನಡೆಯಲಿದೆ.

10 ರಂದು ಬೆಳಗ್ಗೆ 5 ಗಂಟೆಗೆ ತಿರುವಪ್ಪನ ಉತ್ಸವ, 12 ಗಂಟೆಗೆ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಸೇವಾ ಟ್ರಸ್ಟ್ ಅಧ್ಯಕ್ಷರು ತಿಳಿಸಿದ್ದಾರೆ.