ಸೋಮವಾರಪೇಟೆ, ಫೆ. 6: ಕೊಡಗು ಯುವ ವೇದಿಕೆ ಆಶ್ರಯದಲ್ಲಿ ಬೆಂಗಳೂರಿನ ಉಲ್ಲಾಳದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ ಇಲ್ಲಿನ ಆಲೂರು-ಸಿದ್ದಾಪುರದ ಅರೆಭಾಷೆ ಗೌಡ ಸಮಾಜದ ವಾಲಿಬಾಲ್ ತಂಡ ಪ್ರಥಮ ಸ್ಥಾನ ಗಳಿಸಿದೆ.

ಈ ಪಂದ್ಯಾವಳಿಯಲ್ಲಿ ಆಟಗಾರರಾದ ಅಂಜಿರಗಾಲ ರಾಮಣ್ಣ, ಕೊರಬಕ ಆನಂದ, ನಿರ್ವಾಣಿ ಪ್ರಕಾಶ್, ಬಿಲ್ಲರಮಜಲು ಸುದೀಪ್, ಕಳಂಜನ ರಂಜು, ಕಡ್ಯದ ಚಿಂತನ್ ಪಾಲ್ಗೊಂಡಿದ್ದರು.