ವೀರಾಜಪೇಟೆ, ಜ. 30: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರಸ್ತೆ ಮತ್ತು ಇತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಸರಕಾರ ನಗರೋತ್ಥಾನÀ ಯೋಜನೆ ಯಡಿಯಲ್ಲಿ 2017-18ನೇ ಸಾಲಿಗೆ ಬಂದ ರೂ. 1,70 ಕೋಟಿ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳ ಲಾಗುತ್ತಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಗಾಂಧಿನಗರದ ಕರ್ನಲ್ ಓಣಿಗೆ ರೂ. 13 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿದ ಕೆ.ಜಿ. ಬೋಪಯ್ಯ ಮಾತನಾಡಿ ವೀರಾಜಪೇಟೆ ಪಟ್ಟಣದಲ್ಲಿ ಈಗಾಗಲೇ ಎರಡು ರಸ್ತೆಗಳ ಕಾಮ ಗಾರಿ ಮುಗಿದಿದ್ದು ಸಧ್ಯ ದಲ್ಲಿಯೇ ಇನ್ನುಳಿದ ರಸ್ತೆ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದರು.

ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಎಂ. ಶಶಿ ಸುಬ್ರಮಣಿ, ಸ್ಥಳೀಯರಾದ ಕೆ.ಸುರೇಶ್, ಬಿ.ಮಂದಪ್ಪ, ಪಟ್ಟಣ ಪಂಚಾಯಿತಿ ಸದಸ್ಯೆ ಟಿ.ಎಂ. ಜೂನ, ಆಶಾ ಸುಬ್ಬಯ್ಯ, ಪೂರ್ಣಿಮ, ಮಾಜಿ ಅಧ್ಯಕ್ಷ ಇ.ಸಿ. ಜೀವನ್, ಮಾಜಿ ಸದಸ್ಯೆ ರತಿಬಿದ್ದಪ್ಪ, ಬಿಜೆಪಿ ಜಿಲ್ಲಾ ಸಮಿತಿಯ ರಘುನಾಣಯ್ಯ, ಮಲ್ಲಂಡ ಮಧು ದೇವಯ್ಯ, ಗುತ್ತಿಗೆದಾರ ಸಂಪತ್, ಗಾಂಧಿನಗರದ ನಿವಾಸಿಗಳು ಹಾಜರಿದ್ದರು.