ಮಡಿಕೇರಿ, ಜ.30: ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಪೊಲೀಸ್ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಡಿಸಿಆರ್ಬಿ ಇನ್ಸ್ಪೆಕ್ಟರ್ ಎಂ.ಎಂ. ಭರತ್ ಅವರನ್ನು ಬೆಂಗಳೂರು ವಿಜಯನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಯಿತು. ವೀರಾಜಪೇಟೆ ವೃತ್ತ ನಿರೀಕ್ಷಕರಾಗಿದ್ದ ಕುಮಾರ ಆರಾಧ್ಯ ಅವರನ್ನು ಕುಶಾಲನಗರ ವೃತ್ತಕ್ಕೆ ಹಾಗೂ ಕುಶಾಲನಗರ ವೃತ್ತನಿರೀಕ್ಷಕರಾಗಿದ್ದ ಕ್ಯಾತೇಗೌಡ ಅವರನ್ನು ವೀರಾಜಪೇಟೆ ವೃತ್ತಕ್ಕೆ ವರ್ಗಾಯಿಸಲಾಗಿದೆ.