ವೀರಾಜಪೇಟೆ, ಜ. 29: ಬಾಳೆಲೆ ಬಳಿಯ ಎಂ. ದೇವಯ್ಯ ಎಂಬವರ ಕಾಫಿ ತೋಟದಲ್ಲಿ ಸುಮಾರು 145 ಚೀಲ ಕಾಫಿ ಕಳವು ಮಾಡಿದ ಆರೋಪದ ಮೇರೆ ಪೊನ್ನಂಪೇಟೆ ಪೊಲೀಸರು ಅದೇ ಊರಿನ ಎಂ. ವಿನೇಶ್ ಹಾಗೂ ಜೀವು ಪೊನ್ನಣ್ಣ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.
ದೇವಯ್ಯ ಅವರು ನೀಡಿದ ದೂರಿನ ಮೇರೆ ಪೊಲೀಸರು ಮನೆಯನ್ನು ಶೋಧಿಸಿದಾಗ 87 ಚೀಲ ಕಾಫಿ ದೊರೆತಿದ್ದು ಉಳಿದ ಕಾಫಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.