ಮಡಿಕೇರಿ, ಜ. 29: ಪತ್ರಿಕೋದ್ಯಮದಲ್ಲಿ ವೃತ್ತಿಯೊಂದಿಗೆ ಸಾಮಾಜಿಕ ಜವಾಬ್ದಾರಿಯ ಕಳಕಳಿಯೂ ಇರಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಗೊಂಡಿತು.

ಇಲ್ಲಿನ ಫೀ.ಮಾ. ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ವಿಚಾರ ಮಂಡನೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅತಿಥಿಗಳು, ಪತ್ರಕರ್ತರು ಈ ಅಭಿಪ್ರಾಯ ಮಂಡಿಸಿದರು.

ಫೀ.ಮಾ. ಕಾರ್ಯಪ್ಪ ಕಾಲೇಜು ಹಳೆ ವಿಧ್ಯಾರ್ಥಿಗಳ ಸಂಘದ ಅಧ್ಯಕ್ಷೆ ಶೋಭಾ ಸುಬ್ಬಯ್ಯ ಅಧ್ಯP್ಷÀತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಡಿ. ತಿಮ್ಮಯ್ಯ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಗಳಿಗೆ ಪದವಿ ಮಾಡಿದ ಮಾತ್ರಕ್ಕೆ ಉದ್ಯೋಗ ಲಭಿಸುವದಿಲ್ಲ. ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡ ವಿಷಯದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದ ಅವರು, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹೆಚ್ಚಾಗಿ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು. ಇದರೊಂದಿಗೆ ಕನ್ನಡ ಭಾಷೆಯ ಮೇಲೆ ಈಗಿನಿಂದಲೇ ಹಿಡಿತ ಸಾಧಿಸಿದ್ದಲ್ಲಿ ಉದ್ಯೋಗಕ್ಕೆ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಈಗಿನಿಂದಲೇ ಸಮಾಜದಲ್ಲಿರುವ ತೊಡಕುಗಳನ್ನು ಸರಿದೂಗಿಸುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕೊಡಗು ಜಿ¯್ಲÁ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಹಿಂದಿನ ಕಾಲದಲ್ಲಿ ಪತ್ರಿಕೋದ್ಯಮದ ಕುರಿತು ಯಾವದೇ ಕೋರ್ಸ್‍ಗಳು ಇರಲಿಲ್ಲ. ಆದರೆ ಇಂದು ವಿದ್ಯಾರ್ಥಿ ಗಳು ತಮ್ಮನ್ನು ತೊಡಗಿಸಿಕೊಳ್ಳಲು ಸಾಕಷ್ಟು ಅವಕಾಶಗಳು ಇವೆ. ಇಂದು ಯಾರ್ಯಾರೋ ಒತ್ತಡಕ್ಕೆ ಮಣಿದು ಪತ್ರಿಕೋದ್ಯಮಕ್ಕೆ ಪದವಿ ಮಾಡಲು ಸೇರಿಕೊಂಡಿರುತ್ತೀರಿ. ಇದನ್ನೇ ಸದ್ಬಳಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಉತ್ತಮ ಪತ್ರಕರ್ತರಾಗಿ ಹೊರಬರು ವಂತಾಗಲಿ ಎಂದು ಆಶಿಸಿದರು.

ವಿಚಾರ ಮಂಡನೆ: ಹಿರಿಯ ಪತ್ರಕರ್ತ ಚಿ.ನಾ. ಸೋಮೇಶ್ 'ಪತ್ರಿಕೋದ್ಯಮದಲ್ಲಿ ಯುವಜನತೆ ಗಿರುವ ವಿಪುಲ ಅವಕಾಶ' ಕುರಿತು ವಿಚಾರ ಮಂಡಿಸಿ, ಪತ್ರಿಕೋದ್ಯಮ ಪವಿತ್ರವಾದದ್ದು, ಕೋಲ್ಮಿಂಚಿನಂತೆ ಸಂಚರಿಸುವಂತದ್ದು. ಎರಡು ದೃಷ್ಟಿಕೋನವನ್ನಿಟ್ಟು ಕೆಲಸ ಮಾಡುವ ವೃತ್ತಿ ಪತ್ರಿಕೋದ್ಯಮ ಎಂದು ವ್ಯಾಖ್ಯಾನಿಸಿದರು. ಅವರು, ನಾವು ನೋಡಿದ್ದು, ತೋಚಿದ್ದು ಎಲ್ಲವು ಸುದ್ದಿಯಾಗಲು ಸಾಧ್ಯವಿಲ್ಲ. ಸುದ್ದಿಯ ಎಲ್ಲಾ ಆಯಾಮಗಳನ್ನು ಅಧ್ಯಯನ ಮಾಡಿದಾಗ ಮಾತ್ರ ಉತ್ತಮ ವರದಿ ಹೊರಬರಲು ಸಾಧ್ಯ ಎಂದರು.

ಇಂದಿನ ಪತ್ರಿಕೋದ್ಯಮದಲ್ಲಿ ಸಾಕಷ್ಟು ಉದ್ಯೋಗಳು ಇವೆ. ಆದರೆ ಅಷ್ಟೇ ಸ್ಪರ್ಧೆಗಳು ಇವೆ. ವಿದ್ಯಾರ್ಥಿ ದಿಸೆಯಿಂದಲೇ ವರದಿ ರಚನೆ, ಪದಗಳ ಬಳಕೆಯನ್ನು ಕಲಿಯುವಂತಾಗಬೇಕು ಎಂದರು.

‘ಪತ್ರಿಕೋದ್ಯಮ ಶಿಕ್ಷಣ ಮತ್ತು ವೃತ್ತಿ’ ಕುರಿತು ವಿಚಾರ ಮಂಡನೆ ಮಾಡಿದ ವಿಜಯ ಕರ್ನಾಟಕ ಪತ್ರಿಕೆ ವರದಿಗಾರ್ತಿ ಜಯಂತಿ ಉದಿಯಂಡ, ಪತ್ರಿಕೋದ್ಯಮ ಶಿಕ್ಷಣ ಇಂದು ಬಹುಬೇಡಿಕೆಯ ವಿಷಯವಾಗಿದ್ದು, ಹಿಂದೆ ವಿವಿ ಮಟ್ಟದಲ್ಲಿ ಬೆಳೆದು ನಿಂತಿದ್ದ ಪತ್ರಿಕೋದ್ಯಮ ಇಂದು ಪದವಿ ಮಟ್ಟದಲ್ಲೂ ವ್ಯಾಪಕತೆ ಪಡೆದುಕೊಂಡಿರುವದೇ ಇದರ ಜನಪ್ರಿಯತೆಗೆ ಸಾಕ್ಷಿ ಎಂದು ಅಭಿಪ್ರಾಯಿಸಿದರು.

ಒಬ್ಬ ಪತ್ರಿಕೋದ್ಯಮ ವಿದ್ಯಾರ್ಥಿಗೂ ಇತರ ವಿಷಯ ಕಲಿಯುವ ವಿದ್ಯಾರ್ಥಿಗೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಹೆಚ್ಚಿನ ಜವಾಬ್ದಾರಿ ಇದೆ. ಪತ್ರಿಕೋದ್ಯಮ ವಿದ್ಯಾರ್ಥಿ ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು. ಸತ್ಯ ಹೇಳಲು ಆಗದೇ ಇದ್ದರೂ ಸುಳ್ಳನ್ನು ಹೇಳಿ ಜನರ ಕಣ್ಣಿಗೆ ಮಣ್ಣೆರಚಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

'ಮಾಧ್ಯಮದಲ್ಲಿ ಸುದ್ದಿ ತಯಾರಿ ಹೇಗೆ?' ಎಂಬ ವಿಷಯದ ಕುರಿತು ಸ್ಥಳೀಯ 'ಚಿತ್ತಾರ' ವಾಹಿನಿಯ ನಿರ್ದೇಶಕ ಆನಂದ್ ಕೊಡಗು ವಿಚಾರ ಮಂಡಿಸಿ, ವರದಿಯಲ್ಲಿ ಪದಗಳು ಓದುಗರಿಗೆ ಅರ್ಥವಾಗುವಂತೆ ಹಾಗೂ ಸರಳವಾಗಿರಬೇಕು. ಓದುಗರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಂತೆ ವರದಿ ಇರಬೇಕು. ವರದಿಗಾರರಿಗೆ ಸಮಯಪ್ರಜ್ಞೆ ಹಾಗೂ ತಾಳ್ಮೆ ಮುಖ್ಯ ಎಂದು ಹೇಳಿದರು.

ಸ್ಥಳೀಯ ಶಕ್ತಿ ದಿನ ಪತ್ರಿಕೆಯ ಉಪ ಸಂಪಾದಕ ಕುಡೆಕಲ್ ಸಂತೋಷ್ ‘ಸಮಾಜದಲ್ಲಿ ಪತ್ರಕರ್ತನ ಹೊಣೆಗಾರಿಕೆ' ಕುರಿತು ವಿಚಾರ ಮಂಡಿಸಿ, ಪತ್ರಕರ್ತರಿಗೆ ಸಾಮಾಜಿಕ ಜವಾಬ್ದಾರಿ ಮುಖ್ಯವಾಗಿದ್ದು, ಸಮಸ್ಯೆಗಳ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ವರದಿ ಮಾಡುವ ಸಂದರ್ಭದಲ್ಲಿ ಪತ್ರಕರ್ತನಿಗೆ ಮೈಯೆಲ್ಲ ಕಣ್ಣಾಗಿರಬೇಕು. ಯಾವದೇ ಸಂದರ್ಭದಲ್ಲೂ ಎದೆಗುಂದದೆ, ನಿರ್ಭಯವಾಗಿ ಕಾರ್ಯನಿರ್ವಹಿಸುವ ತುಡಿತ ಹೊಂದಿರಬೇಕೆಂದರು. ಸ್ವಂತಿಕೆ ಮುಖ್ಯವಾಗಿದ್ದು, ಪ್ರಶ್ನಿಸುವ ಪ್ರವೃತ್ತಿಯೊಂದಿಗೆ ಸಮಾಜವನ್ನು ಜಾಗೃತಗೊಳಿಸುವ ಹೊಣೆಗಾರಿಕೆ ಹೊಂದಿರಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯ ಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಬಿ.ಜಿ. ಜ್ಯೋತಿಕಾ ಪ್ರಥಮ ಸ್ಥಾನ ಪಡೆದುಕೊಂಡರೆ, ಆರ್.ಅಭಿಷೇಕ್ ದ್ವಿತೀಯ ಸ್ಥಾನ ಹಾಗೂ ಎಚ್.ಎಂ.ಆಶಾ ತೃತೀಯ ಸ್ಥಾನಗಳಿಸಿ ದರು. ಭಾಷಣ ಸ್ಪರ್ಧೆಯಲ್ಲಿ ಕೆ.ಡಿ. ಯಶ್ವಿನಿ ಪ್ರಥಮ, ವೇದಶ್ರೀ ದ್ವಿತೀಯ ಹಾಗೂ ಕೆ.ಎಲ್.ಲೀನಾ ತೃತೀಯ ಸ್ಥಾನ ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅತಿಥಿ ಗಣ್ಯರು ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ, ಫೀ.ಮಾ ಕಾರ್ಯಪ್ಪ ಕಾಲೇಜು ಹಳೆ ವಿಧ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಶ್ಯಾಂ ಪೂಣಚ್ಚ, ಉಪಾಧ್ಯಕ್ಷ ಅಪ್ಪಯ್ಯ, ಸದಸ್ಯ ಚರ್ಮಣ ಸೇರಿದಂತೆ ಇತರರು ಇದ್ದರು. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶ್ನೆಗಳನ್ನು ಕೇಳುತ್ತಾ ಪತ್ರಕರ್ತ ರೊಂದಿಗೆ ಸಂವಾದ ನಡೆಸಿದರು.