ಸಿದ್ದಾಪುರ,ಜ.29: ಕೇರಳ ರಾಜ್ಯದ ಪ್ರವಾಸಿ ಭಾರತಿ ಅಸೋಸಿಯೇಶನ್ ವತಿಯಿಂದ ನೀಡುವ “ಕರ್ಮ ಶ್ರೇಯಸ್” ಪ್ರಶಸ್ತಿಗೆ ಸಿದ್ದಾಪುರದ ಕಾಫಿ ಬೆಳೆಗಾರರಾದ ಡಾ.ಪಿ.ಸಿ ಹಸೈನಾರ್ ಹಾಜಿರವರು ಭಾಜನರಾಗಿದ್ದಾರೆ. ಕೇರಳ ರಾಜ್ಯದ ತಿರುವಂತಪುರದಲ್ಲಿ ಪ್ರವಾಸಿ ಭಾರತಿ ಅಸೋಸಿಯೇಶನ್ ವತಿಯಿಂದ ಇಲ್ಲಿನ ವಿ.ಜೆ.ಟಿ. ಸಭಾಂಗಣದಲ್ಲಿ ನಡೆದ 17ನೆಯ ‘ಪ್ರವಾಸಿ ಭಾರತಿ-2019’ ವಾರ್ಷಿಕ ಪ್ರಶಸ್ತಿಯನ್ನು ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷÀ ಡಾ.ಪಿ.ಸಿ ಹಸೈನಾರ್ ಹಾಜಿರವರಿಗೆ ಕರ್ಮ ಶ್ರೇಯಸ್ ಪ್ರಶಸ್ತಿಯನ್ನು ಕೇರಳದ ರಾಜ್ಯದ ರಾಜ್ಯಪಾಲ ನ್ಯಾಯಮೂರ್ತಿ ಪಿ.ಸದಾಶಿವಂರವರು ಹಾಗೂ ಗಣ್ಯರು ನೀಡಿ ಸನ್ಮಾನಿಸಿ, ಗೌರವಿಸಿದರು.