ವೀರಾಜಪೇಟೆ, ಜ.29: ವೀರಾಜಪೇಟೆ ತಾಲೂಕು ಕಚೇರಿಯ ಮಿನಿ ವಿಧಾನ ಸೌಧದ ಮುಂದೆ ತಾ. 30 ರಂದು (ಇಂದು) ಬೆಳಿಗ್ಗೆ 10.30ಗಂಟೆಗೆ ತಾಲೂಕು ಸಾರ್ವಜನಿಕ ಹಿತರಕ್ಷಣಾ ಸಮಿತಿ ಹಾಗೂ ಅಮ್ಮತ್ತಿ ರೈತ ಸಂಘದ ವತಿಯಿಂದ ಧರಣಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ಕುಶಾಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಬೋಪಯ್ಯ, ಹಸೈನಾರ್ ಅವರುಗಳು ತಿಳಿಸಿದ್ದಾರೆ.