ಕೂಡಿಗೆ, ಜ. 25: ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾಗಿ ಕೆ.ಕೆ. ನಾಗರಾಜ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಸಮಿತಿಯ ಕಾರ್ಯದರ್ಶಿಯಾಗಿ ಕಾಲೇಜು ಪ್ರಾಂಶುಪಾಲ ಮಹಲಿಂಗಯ್ಯ, ನಿರ್ದೇಶಕರುಗಳಾಗಿ ಕೆ.ಎಂ. ರಾಮಸ್ವಾಮಿ, ರೂಪ, ಶೋಭ, ಜನಾರ್ದನ್, ಮಹೇಶ್, ಹಿರಿಯ ಉಪನ್ಯಾಸಕ ನಾಗಪ್ಪ, ವಿದ್ಯಾರ್ಥಿ ಪ್ರತಿನಿಧಿಗಳಾಗಿ ಪಂಚಮಿ, ಗಣೇಶ್ ಆಯ್ಕೆಗೊಂಡಿರುತ್ತಾರೆ. ಆಯ್ಕೆ ಪ್ರಕ್ರಿಯೆ ಶಾಸಕ ಅಪ್ಪಚ್ಚು ರಂಜನ್ ಸಮ್ಮುಖದಲ್ಲಿ ನಡೆಯಿತು.