ಶನಿವಾರಸಂತೆ, ಜ. 18: ಶನಿವಾರಸಂತೆಯ ಸಮೀಪದ ಗುಡುಗಳಲೆ ಜಾತ್ರಾ ಮೈದಾನದ ಬಳಿ ಬುಧವಾರ ರಾತ್ರಿ ಕಾರು (ಕೆ.ಎ.3. ಎಡಿ1621) ಟೈರ್ ಪಂಚರ್ ಆಗಿ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿದ್ದ ಕಲ್ಲಿನ ಮೋರಿಗೆ ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ಜಖಂ ಆಗಿದ್ದು, ಚಾಲಕನ ಕಾಲಿಗೆ ಪೆಟ್ಟಾಗಿದೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಗೋಪಾಲಪುರ ಗ್ರಾಮದ ಚಾಲಕ ವೃತ್ತಿಯ ಜಿ.ಆರ್. ಕಿರಣ್ ತಮ್ಮ ಕಾರಿನಲ್ಲಿ ಶನಿವಾರಸಂತೆಗೆ ಬಂದು ವಾಪಾಸು ಮನೆಗೆ ಹೋಗುತ್ತಿರುವಾಗ ಕಾರಿನ ಮುಂಭಾಗದ ಎಡಭಾಗದ ಟೈರ್ ಪಂಚರ್ ಆಗಿ ಕಾರು ನಿಯಂತ್ರಣ ತಪ್ಪಿ ಕಲ್ಲಿನ ಮೋರಿಗೆ ಡಿಕ್ಕಿಯಾದ ಪರಿಣಾಮ ಕಾರಿನ ಮುಂಭಾಗ ಪೂರ್ಣ ಜಖಂ ಆಗಿದ್ದು, ಚಾಲಕನ ಕಾಲಿನ ತೊಡೆಯ ಭಾಗಕ್ಕೆ ಪೆಟ್ಟಾಗಿದೆ. ಗಾಯಾಳುವನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ದಾಖಲು ಪಡಿಸಿ ವೈದ್ಯರ ಸಲಹೆಯಂತೆ ಹಾಸನದ ಚಾಮರಾಜೇಂದ್ರ ಆಸ್ಪತ್ರೆಗೆ ದಾಖಲು ಪಡಿಸಲಾಗಿದೆ.