ವೀರಾಜಪೇಟೆ, ಜ. 10: ವೀರಾಜಪೇಟೆಯ ಖಾಸಗಿ ಬಸ್ಸು ನಿಲ್ದಾಣದ ಹಿಂಭಾಗದ ಖಾಲಿ ಜಾಗದಲ್ಲಿ ಸಿಂಗಲ್ ನಂಬರಿನ ಜೂಜಾಟ ಆಡಿಸುತ್ತಿದ್ದ ಇಲ್ಲಿನ ಶಿವಕೇರಿಯ ಆಟೋ ಚಾಲಕ ಎಚ್.ವಿ. ವಿಶ್ವನಾಥ್ ಎಂಬಾತನನ್ನು ನಗರ ಪೊಲೀಸರ ತಂಡ ಧಾಳಿ ನಡೆಸಿ ಜೂಜಾಟದ ಪಣಕ್ಕಿಟ್ಟಿದ್ದ ರೂ. 4000 ನಗದನ್ನು ವಶ ಪಡಿಸಿಕೊಂಡು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

ವೀರಾಜಪೇಟೆ ನಗರ ಪೊಲೀಸರಿಗೆ ದೊರೆತ ಸುಳಿವಿನ ಮೇರೆ ಪೊಲೀಸರು ಧಾಳಿ ನಡೆಸಿದರಲ್ಲದೆ ಪೊಲೀಸರು ಡಿಸೆಂಬರ್ ತಿಂಗಳಲ್ಲಿ ಸಿಂಗಲ್ ನಂಬರಿನ ಎರಡು ಹಾಗೂ ಜನವರಿಯಲ್ಲಿ ಒಂದು ಪ್ರಕರಣ ಸೇರಿದಂತೆ ಮೂರು ಪ್ರಕರಣಗಳಲ್ಲಿಯೂ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.