ವೀರಾಜಪೇಟೆ, ಜ. 10: ವೀರಾಜಪೇಟೆ ಮಗ್ಗುಲ ಗ್ರಾಮದ ಬಳಿಯ ವಿನಾಯಕ ನಗರದ ಗದ್ದೆಯಲ್ಲಿ ಜೂಜಾಡುತ್ತಿದ್ದ ನಾಲ್ವರನ್ನು ನಗರ ಪೊಲೀಸರು ಬಂಧಿಸಿ ಜೂಜಾಟದ ಪಣಕ್ಕಿಟ್ಟಿದ್ದ ರೂ 75,440 ನಗದನ್ನು ವಶ ಪಡಿಸಿಕೊಂಡಿದ್ದಾರೆ. ವೀರಾಜಪೇಟೆ ನಗರ ಪೊಲೀಸರಿಗೆ ದೊರೆತ ಖಚಿತ ಸುಳಿವಿನ ಮೇರೆ ಪೊಲೀಸರು ವಿನಾಯಕ ನಗರದ ಗದ್ದೆಯಲ್ಲಿ ಜೂಜಾಟ ತಂಡದ ಮೇಲೆ ಧಾಳಿ ನಡೆಸಿ ಸ್ಥಳದಲ್ಲಿದ್ದ ಕೆ.ಪಿ.ದೀಪಕ್, ಟಿ.ಜೆ. ಗÉೀಶ್, ಎಚ್.ಎಂ. ರಾಜೇಶ್, ಎಚ್.ಎಸ್. ಗೋಪಾಲ್ ಎಂಬ ನಾಲ್ವರನ್ನು ಬಂಧಿಸಿದ್ದಾರೆ. ಜೂಜಾಟದಲ್ಲಿ ಒಟ್ಟು 8 ಮಂದಿ ಭಾಗವಹಿಸಿದ್ದು ಧಾಳಿ ಸಮಯದಲ್ಲಿ ನಾಲ್ಕು ಮಂದಿ ತಲೆಮರೆಸಿಕೊಂಡಿದ್ದು ಈ ನಾಲ್ವರನ್ನು ಸಧ್ಯದಲ್ಲಿಯೇ ಬಂಧಿಸುವದಾಗಿ ಪೊಲೀಸರು ತಿಳಿಸಿದ್ದಾರೆ. ವೀರಾಜಪೇಟೆ ನಗರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸಂತೋಷ್ ಕಶ್ಯಪ್ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮುನೀರ್, ಸುನಿಲ್, ಸುಬ್ರಮಣಿ, ಆನಂದ, ಗಿರೀಶ್, ಸತೀಶ್ ಭಾಗವಹಿಸಿದ್ದರು.