ನಾಪೆÇೀಕ್ಲು, ಜ. 6: ಬಲ್ಲಮಾವಟಿ ವೃತ್ತದ ಪಶ್ಚಿಮ ಕೊಳಕೇರಿ ಅಂಗನವಾಡಿ ಕಾರ್ಯಕರ್ತೆ ಕಾಂಡಂಡ ಗೌರಮ್ಮ ನಿವೃತ್ತಿಯಾದ ಹಿನ್ನೆಲೆಯಲ್ಲಿ ನಾಪೆÇೀಕ್ಲು ಪಟ್ಟಣ ಅಂಗನವಾಡಿ ಕೇಂದ್ರದಲ್ಲಿ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಗೌರಮ್ಮ ನನ್ನ 30 ವರ್ಷಗಳ ಸೇವಾವಧಿ ನನಗೆ ತೃಪ್ತಿ ತಂದಿದೆ. ಎಲ್ಲರೂ ಸರಕಾರಿ ಕೆಲಸ ದೇವರ ಕೆಲಸ ಎಂದು ಭಾವಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಶಿಕ್ಷಕಿ ಜ್ಯೋತಿ ಪ್ರಾರ್ಥನೆ, ಸಿ.ಯು. ಪವಿತ್ರ ಸ್ವಾಗತಿಸಿ, ನಿರೂಪಿಸಿದರೆ, ಸುಜಾತ ವಂದಿಸಿದರು. ಸುಶೀಲ, ಲೀಲಾವತಿ, ಶ್ವೇತಾ ಕುಮಾರಿ, ಸಫ್ರೀನಾ, ಮತ್ತಿತರರು ಇದ್ದರು.