ಶನಿವಾರಸಂತೆ, ಜ. 5: ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆಯಡಿ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಮುಖ್ಯ ಶಿಕ್ಷಕಿ ಪದ್ಮಾವತಿ ಸುಗಮ ಸಂಗೀತ ಕಾರ್ಯಕ್ರಮ ಮಕ್ಕಳಿಗೆ ಮನರಂಜನೆ ನೀಡುವದರ ಜೊತೆಗೆ ನಾಡು-ನುಡಿ, ಸಂಸ್ಕøತಿ ಹಾಗೂ ಭಾಷೆಯ ಬಗ್ಗೆ ಅಭಿಮಾನ ಮೂಡಿಸುತ್ತದೆ ಎಂದರು.

ಕಲಾವಿದರಾದ ಎಸ್. ಶಿವಣ್ಣ, ಎಂ.ಆರ್. ದೇವಯ್ಯ, ನಿಂಗಯ್ಯ, ಜಗದೀಶ್, ಶಿವಮ್ಮ ಹಾಗೂ ರತ್ನಮ್ಮ ಅವರು ಪ್ರಚಾರ ಗೀತೆಗಳನ್ನು ಹಾಡಿ ರಂಜಿಸಿದರು. ಸಹ ಶಿಕ್ಷಕರು ಹಾಜರಿದ್ದರು.