ಮಡಿಕೇರಿ, ಜ. 5: ಗಾಳಿಬೀಡು ಗ್ರಾಮದ ಕೊಂಬಾರನ ಪಿ. ಗಣಪತಿ ಅವರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದು, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಮುಖೇನ ಮುಖ್ಯಮಂತ್ರಿಗಳಿಂದ ಪರಿಹಾರ ಕೋರಿದರು.

ಮುಖ್ಯಮಂತ್ರಿಗಳು ತಮ್ಮ ಪರಿಹಾರ ನಿಧಿಯಿಂದ ರೂ 75,000 ವನ್ನು ಮಂಜೂರು ಮಾಡಿದ್ದಾರೆ. ಸದರಿ ಚೆಕ್‍ನ್ನು ವೀಣಾ ಅಚ್ಚಯ್ಯ ಅವರು ತಮ್ಮ ಕಚೇರಿಯಲ್ಲಿ ಗಣಪತಿ ಅವರಿಗೆ ವಿತರಿಸಿದರು.