*ಗೋಣಿಕೊಪ್ಪ, ಜ. 1 : ಮಳೆಗಾಲದಲ್ಲಿ ಜಲಾವೃತ್ತಗೊಳ್ಳುತ್ತಿದ್ದ ಬಾಳೆಲೆ, ದೇವನೂರು, ರಾಜಪುರ ರಸ್ತೆ ಸಂಪರ್ಕ ಕಲ್ಪಿಸುವ ಕೀರೆಹೊಳೆ ಸೇತುವೆ ಎತ್ತರಿಸುವ ಕಾಮಗಾರಿಗೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿದರು.

ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ಕೀರೆಹೊಳೆ ಸೇತುವೆಯು 2 ಕೋಟಿ 43 ಲಕ್ಷ ವಚ್ಚದಲ್ಲಿ ಎಲ್.ಓ. ಎಫ್. ಕನ್ಸ್‍ಟ್ರಕ್ಷನ್ ಸಂಸ್ಥೆ ವತಿಯಿಂದ ಕಾಮಗಾರಿ ನಡೆಯಲಿದೆ. ಸೇತುವೆಯು 8.30 ಮೀ. ಅಗಲ 19 ಮೀ. ಉದ್ದ ಮತ್ತು 1 ಮೀ. ಎತ್ತರದಲ್ಲಿ ಮತ್ತು ಸೇತುವೆಯ ಎರಡು ಬದಿಗಳಲ್ಲಿ 95 ಮೀ. ಅಳತೆಯಲ್ಲಿ ಎತ್ತರಿಸುವ ಕಾರ್ಯವು ನಡೆಯಲಿದೆ. ಜೊತೆಗೆ 3 ಅಡಿ ಫುಟ್‍ಪಾತ್ ನಿರ್ಮಾಣವು ಆಗಲಿದೆ ಎಂದು ಶಾಸಕರು ಈ ಸಂದರ್ಭ ಮಾಹಿತಿ ನೀಡಿದರು.

ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಕಾಂಡೇರ ಕುಸುಮ, ಉಪಾಧ್ಯಕ್ಷ ರಂಜನ್, ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಸುಕೇಶ್, ಜಿ.ಪಂ. ಮಾಜಿ ಸದಸ್ಯ ಅರಮಣಮಾಡ ರಂಜನ್, ಪ್ರಮುಖರಾದ ಬೋಷ್ ಮಂದಣ್ಣ, ಅಡ್ಡೆಂಗಡ ನವೀನ್, ಸಿ.ಕೆ.ಉತ್ತಪ್ಪ, ಪಾರುವಂಗಡ ಕರುಂಬಯ್ಯ, ಬಾದುಮಾಡ ಪೊನ್ನಪ್ಪ, ಅರಮಣಮಾಡ ಬಾಬು ಪ್ರಸಾದ್, ಕೃಷ್ಣ, ಚಕ್ಕೇರ ಸೂರ್ಯ, ಮಹೇಶ್‍ಕುಮಾರ್, ತಾಲೂಕು ಫೆÉಡರೇಷನ್ ನಿರ್ದೇಶಕ ಮಲ್ಲಂಡ ಮಧು ದೇವಯ್ಯ ಇಂಜಿನಿಯರ್ ಗಳಾದ ರಾಜೇಶ್ ಚೆಂಗಪ್ಪ, ಪಧ್ಮನಾಭ, ಧರ್ಮಗೌಡ ಹಾಜರಿದ್ದರು.