ಮಡಿಕೇರಿ, ಜ.1: ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ವತಿಯಿಂದ ತಾ. 6 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಸಮಾಜ ಬಾಂಧವರಿಗೆ ಪ್ರತಿಭಾ ಪುರಸ್ಕಾರ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನರ್ಸರಿ, ಎಲ್‍ಕೆಜಿ ಹಾಗೂ ಯುಕೆಜಿ ಮಕ್ಕಳು, 1 ರಿಂದ 4ನೇ ತರಗತಿ, 5 ರಿಂದ 7ನೇ ತರಗತಿ ಮಕ್ಕಳಿಗೆ ಬಾಲವಿಭಾಗ, 8 ರಿಂದ ದ್ವಿತೀಯ ಪಿಯುಸಿ, ಪದವಿ ಮಕ್ಕಳಿಗೆ ಪ್ರೌಢವಿಭಾಗಗಳಲ್ಲಿ ಕ್ರಮವಾಗಿ ಮುತ್ತು ಹೆಕ್ಕುವದು, ಚಿತ್ರಕಲೆ, ರಸಪ್ರಶ್ನೆ, ಯೋಗ, ಬರಹ, ಪರಿಕರ ಜೋಡಣೆ ಏರ್ಪಡಿಸಿದೆ. ಮಹಿಳೆಯರಿಗೆ ಹೂದಾನಿ, ಪುರುಷರಿಗೆ ಏಕಪಾತ್ರಾಭಿನಯ ಆಯೋಜಿಸಲಾಗಿದೆ. ವಿವಿಧ ಮನೋರಂಜನಾ ಆಟಗಳನ್ನು ಏರ್ಪಡಿಸಿದ್ದು, ಮಧ್ಯಾಹ್ನ 2.30ರ ಬಳಿಕ ಸಮಾರಂಭ ಜರುಗಲಿದ್ದು, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಮುಖ್ಯಾಧಿಕಾರಿ ವಿದ್ಯಾ ಹರೀಶ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಆಸಕ್ತರು 9448119993, 9448000446, 9448217104 ಸಂಪರ್ಕಿಸಬಹುದು.