ವೀರಾಜಪೇಟೆ, ಡಿ. 26: ವೀರಾಜಪೇಟೆಯ ವಿಕ್ಟೋರಿಯ ಕ್ಲಬ್ ಮೂಲಕ ಪ್ರಾಕೃತಿಕ ದುರಂತಕ್ಕೊಳಗಾಗಿ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡ 15 ಮಂದಿ ಸಂತ್ರಸ್ತರಿಗೆ ಇಂದು ಆರ್ಥಿಕ ನೆರವು ನೀಡಲಾಯಿತು. ವಿಕ್ಟೋರಿಯಾ ಕ್ಲಬ್ ಸಭಾಂಗಣದಲ್ಲಿ ಇಂದು ಪರಿಹಾರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಂಗಳೂರಿನ ಉದ್ಯಮಿ ಮುಕ್ಕಾಟ್ಟಿರ ಅಣ್ಣಯ್ಯ, ಬೆಂಗಳೂರು ಕೊಡವ ಸಮಾಜ ಮಾಜಿ ಅಧ್ಯಕ್ಷ ಮಂಡೆಡ ರವಿ ಉತ್ತಪ್ಪ, ಮಾಕ್ಸ್‍ಮೆನ್ ಸಂಸ್ಥೆ ಅಧ್ಯಕ್ಷ ಡಾ ಮುಕ್ಕಾಟ್ಟರ ಕಾರ್ಯಪ್ಪ ಸಂತ್ರಸ್ತರಿಗೆ ಒಟ್ಟು ರೂ. 3.24 ಲಕ್ಷಗಳ ಪರಿಹಾರ ವಿತರಿಸಿದರು.

ಕ್ಲಬ್ ಅಧ್ಯಕ್ಷ ಮುಕ್ಕಾಟಿರ ಕ್ಯಾಟಿ ಉತ್ತಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಮಾರ್ಚಂಡ ಗಣೇಶ್, ಕಂಡ್ರತಂಡ ಪ್ರವೀಣ್, ನಡಿಕೇರಿಯಂಡ ಅರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.