ಕೂಡಿಗೆ, ಡಿ. 25: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತೊರೆನೂರು ಗ್ರಾಮದಲ್ಲಿ ಸರ್ವ ಸೇವಾ ಸಂಘವನ್ನು ವಲಯದ ಮೇಲ್ವಿಚಾರಕ ವಿನೋದ್ ಕುಮಾರ್ ಉದ್ಘಾಟಿಸಿದರು. ಈ ಸಂಘಗಳ ಮೂಲಕ ಜನರಿಗೆ ಉಳಿತಾಯದ ಮನೋಭಾವನೆ ಬರುತ್ತದೆ. ಕೃಷಿ ಕಾರ್ಯಗಳಿಗೆ ಪೂರಕವಾಗಿ ಅವಶ್ಯಕತೆ ಇರುವ ಸಂದರ್ಭಗಳಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ಹಣ ಜಮೆ ಮಾಡುವ ಮೂಲಕ ಬ್ಯಾಂಕಿಂಗ್ ವ್ಯವಹಾರದ ಜ್ಞಾನ ಮೂಡುತ್ತದೆ ಎಂದರು. ಈ ಸಂದರ್ಭ ಸೇವಾಪ್ರತಿನಿಧಿ ನಾಗವೇಣಿ, ಒಕ್ಕೂಟದ ಪದಾಧಿಕಾರಿಗಳು ಹಾಜರಿದ್ದರು.